ನನಗೆ ಟಿಕೆಟ್ ದೊರೆಯದೇ ಇರುವುದಕ್ಕೆ ಸಿಎಂ ಬೊಮ್ಮಾಯಿ ಕಾರಣ: ಶಾಸಕ ನೆಹರು ಓಲೇಕಾರ ಆರೋಪ

ಹೊಸದಿಗಂತ ವರದಿ,ಹಾವೇರಿ : 

ನನಗೆ ಟಿಕೆಟ್ ದೊರೆಯದೇ ಇರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪ್ರಮುಖ ಕಾರಣೀಕರ್ತರು. ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೆಲಸವನ್ನು ಬಾರಿ ಮಾಡಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಅವರ ಸರಿ ಸಮಾನವಾಗಿ ಬೆಳೆಯುವುದು ಅಅವರಿಗೆ ಬೇಕಾಗಿಲ್ಲ. ನನ್ನಿಂದ ಅವರ ರಾಜಕೀಯ ಜೀವನಕ್ಕೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ನನಗೆ ಟಿಕೆಟ್ ದೊರೆಯದಂತೆ ಮಾಡಿದರು ಎಂದರು.
ನನಗೆ ಟಿಕೆಟ್ ದೊರೆಯದಿರುವುದಕ್ಕೆ ಬೊಮ್ಮಾಯಿ ಅವರಲ್ಲದೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಕಾರಣೀಕರ್ತರು ಎಂದು ತಿಳಿಸಿದರು.
ಹಿಂದಿನಿoದಲೂ ನನ್ನ ವಿರುದ್ದ ಹಗೆ ಸಾಧಿಸುತ್ತ ಬಂದಿದ್ದರು.ಕಳೆದ ಬಾರಿ ನನಗೆ ಟಿಕೆಟ್ ತಪ್ಪಿಸುವುದಕ್ಕೆ ಪ್ರಯತ್ನಿಸಿದ್ದರು ಆದರೆ ಕಳೆದ ಬಾರಿ ಸಾಧ್ಯವಾಗಿರಲಿಲ್ಲ ಈ ಬಾರಿ ಅದನ್ನು ಸಾಧಿಸಿದ್ದಾರಷ್ಟೆ ಎಂದು ಹೇಳಿದರು.
ಈ ಬಾರಿ ಮುಖ್ಯಮಂತ್ರಿಗಳು ಶಿಗ್ಗಾವ್ ಕ್ಷೇತ್ರದಲ್ಲಿ ಹೇಗೆ ಗೆಲುವು ಸಾಧಿಸುತ್ತಾರೆ ಎನ್ನುವುದನ್ನು ನಾವು ನೋಡುತ್ತೇವೆ. ಅವರು ಮುಖ್ಯಮಂತ್ರಿ ಆಗುವುದಕ್ಕೂ ಪೂರ್ವದಲ್ಲಿನ ಮತ್ತು ಸಿಎಂ ಆದ ನತರದಲ್ಲಿ ನಡೆದಿರುವ ಹಗರಣಗಳ ಕುರಿತು ದಾಖಲೆ ಸಹಿತವಾಗಿ ಬಯಲಿಗೆಳೆಯುತ್ತೇನೆ. ಶಿಗ್ಗಾವ್ ತಾಲೂಕಿನಲ್ಲಿ ಆಗಿರುವ ೧೫೦೦ ಕೋಟಿ ರೂಗಳ ತುಂತುರು ನೀರಾವರಿ ಯೋಜನೆಯಲ್ಲಿ ಆಗಿರುವ ಅವ್ಯವಹಾರ ಕುರಿತು ದಾಖಲೆ ಸಹಿತ ಬಹಿರಂಗಪಡಿಸುವದಾಗಿ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಪೂರ್ವದಲ್ಲಿ ನೆಹರು ಓಲೇಕಾರ ಅವರು ತಮ್ಮ ಬೆಂಬಲಿಗರೊoದಿಗೆ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ತಮಗೆ ಟಿಕೆಟ್ ನೀಡದ ಕಾರಣಕ್ಕೆ ತಮ್ಮ ನೂರಾರು ಬೆಂಬಲಿಗರೊoದಿಗೆ ಪ್ರತಿಭಟನೆ ಮಾಡಿದರು.
ಟಿಕೆಟ್ ದೊರೆಯದ ಕಾರಕ್ಕೆ ಓಲೇಕಾರ ಅವರು ಜೆಡಿಎಸ್ ಪಕ್ಷ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು ಆದರೆ ನೆಹರು ಓಲೇಕಾರ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಯಾವುದೇ ನಿರ್ಧಾರ ತಗೆದುಕೊಳ್ಳಬಾರದು ಎಂದು ಬಿಎಸ್‌ವಾಯ್ ಅವರು ಓಲೇಕಾರ ಅವರಿಗೆ ತಿಳಿಸಿದ್ದಾರೆ ಎಂದು ಅವರ ಬೆಂಬಲಿಗರು ಪತ್ರಿಕೆಗೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!