August 22, 2026
Saturday, August 22, 2026
spot_img

ದೇವಸ್ಥಾನ, ಶಾಲೆ ಬಳಿಯಿರುವ 717 ಎಣ್ಣೆ ಅಂಗಡಿಗೆ ಬೀಗ ಹಾಕಿಸಿದ ಸಿಎಂ ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿನ ಸಿಎಂ ಜೋಸೆಫ್‌ ವಿಜಯ್‌ ಡ್ಯೂಟಿ ಆರಂಭಿಸಿದ ತಕ್ಷಣವೇ ಶಾಲೆ, ದೇವಸ್ಥಾನ ಹಾಗೂ ಬಸ್‌ಸ್ಟಾಂಡ್‌ ಬಳಿಯಿರುವ ಮದ್ಯದಂಗಡಿಗಳನ್ನು ಬಂದ್‌ ಮಾಡಿಸಿದ್ದಾರೆ.

ಪೂಜಾ ಸ್ಥಳಗಳು, ಸಾರ್ವಜನಿಕ ಬಸ್‌ಸ್ಟಾಂಡ್‌ ಮತ್ತು ಶಿಕ್ಷಣ ಸಂಸ್ಥೆಗಳ 500 ಮೀಟರ್ ವ್ಯಾಪ್ತಿಯೊಳಗೆ ಬರುವ 717 ಸರ್ಕಾರಿ ಸ್ವಾಮ್ಯದ ಟಿಎಎಸ್​ಎಂಎಸಿ ಮದ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಎರಡು ವಾರದಲ್ಲಿ ಮುಚ್ಚಬೇಕೆಂದು ಆದೇಶಿಸಿದ್ದಾರೆ.

ಇದೆಲ್ಲ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಗುರುತಿಸಲಾದ 717 ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ, ಪೂಜಾ ಸ್ಥಳಗಳ ಬಳಿ 276 ಅಂಗಡಿಗಳು, ಶಿಕ್ಷಣ ಸಂಸ್ಥೆಗಳ ಬಳಿ 186 ಅಂಗಡಿಗಳು ಮತ್ತು ಬಸ್ ನಿಲ್ದಾಣಗಳ ಬಳಿ 255 ಅಂಗಡಿಗಳನ್ನು ಗುರುತಿಸಲಾಗಿದೆ.

ಈ ಹಿಂದೆ ಸಾಕಷ್ಟು ಜನರಿಂದ ದೇವಸ್ಥಾನ, ಶಿಕ್ಷಣ ಸಂಸ್ಥೆಗಳ ಬಳಿ ಇರುವ ಮದ್ಯದ ಅಂಗಡಿಗಳನ್ನು ಮುಚ್ಚಿ ಎಂದು ಸರ್ಕಾರಕ್ಕೆ ಕರೆಗಳು ಬಂದಿದ್ದವು.ಇದನ್ನು ಗಮನಕ್ಕೆ ತೆಗೆದುಕೊಂಡ ಸಿಎಂ ವಿಜಯ್‌ ಎಲ್ಲವನ್ನೂ ಎರಡು ವಾರದಲ್ಲಿ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !