ಪ್ರಯಾಗರಾಜ್‌ನಲ್ಲಿರುವ ಪರಮಾರ್ಥ ನಿಕೇತನ ಕುಂಭಮೇಳ ಶಿಬಿರಕ್ಕೆ ಸಿಎಂ ಯೋಗಿ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಮಾರ್ಥ ನಿಕೇತನ ಕುಂಭಮೇಳ ಶಿಬಿರಕ್ಕೆ ಭೇಟಿ ನೀಡಿದ್ದು, ಭಾರತೀಯ ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರ ನಡೆಯುತ್ತಿರುವ ‘ಕಥಾ’ದಲ್ಲಿ ಪಾಲ್ಗೊಳ್ಳಲು ಋಷಿಕೇಶ ಮೂಲದ ಪರಮಾರ್ಥ ನಿಕೇತನ ಆಶ್ರಮದ ಆಧ್ಯಾತ್ಮಿಕ ಮುಖ್ಯಸ್ಥ ಸ್ವಾಮಿ ಚಿದಾನಂದ ಸರಸ್ವತಿ ಅವರು ಸಿಎಂ ಯೋಗಿ ಅವರನ್ನು ಸ್ವಾಗತಿಸಿದರು.

“ಕೋಟಿಗಟ್ಟಲೆ ಜನರು ಪವಿತ್ರ ಸ್ನಾನ ಮಾಡಲು ಪ್ರತಿದಿನ ಪ್ರಯಾಗರಾಜ್‌ಗೆ ಭೇಟಿ ನೀಡುತ್ತಿದ್ದಾರೆ. ಆಶ್ಚರ್ಯಕರವಾಗಿ, ಒಂದು ಗಂಟೆಯೊಳಗೆ 10 ಲಕ್ಷ ಜನರು ಸ್ನಾನ ಮಾಡುತ್ತಿದ್ದಾರೆ. ಯೋಗಿ ಜಿ ಇಲ್ಲಿ ಮಾಡಿದ ಜನಸಂದಣಿ ನಿರ್ವಹಣೆ, ಕಾರ್ಯಕ್ರಮ ನಿರ್ವಹಣೆ ಮತ್ತು ಸುರಕ್ಷತೆ ಅದ್ಭುತವಾಗಿದೆ” ಎಂದು ಸರಸ್ವತಿ ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ ಇಂದು ಬೆಳಿಗ್ಗೆ 8 ಗಂಟೆಗೆ 1.7 ಮಿಲಿಯನ್ ಯಾತ್ರಿಕರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!