ಕೈ-ಕಮಲ‌ ಟ್ವೀಟ್ ಸಮರ: ನೋ‌ ಕಮೆಂಟ್ಸ್, ಮೂರು ದಿನ ನನ್ನ ಸುಮ್ಮನೆ ಬಿಟ್ಟುಬಿಡಿ ಎಂದ ಡಿಕೆಶಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅತ್ತ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್ ಆರಂಭವಾಗಿದ್ದರೆ, ಇತ್ತ ಕೆಪಿಸಿಸಿ ಅಧ್ಯಕ್ಷರು, ನೋ ಕಮೆಂಟ್ಸ್, ನನ್ನ ಮೂರು ದಿನ ಸುಮ್ಮನೆ ಬಿಡ್ಬಿಡಿ ಅಂದಿದ್ದಾರೆ!

ಟ್ವೀಟ್ ಸಮರ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ನನ್ನ ಮೂರು ದಿನ ಬಿಟ್ಟುಬಿಡಿ, ಸ್ವಾತಂತ್ರ್ಯದ ಹಬ್ಬ ಆಗಲಿ ಆಮೇಲೆ ಸಿಎಂ ಬದಲಾವಣೆ ವಿಚಾರದ‌ ಬಗ್ಗೆ ಎಲ್ಲ ಮಾತನಾಡುತ್ತೇನೆ ಎಂದಿದ್ದಾರೆ.

ಬಿಜೆಪಿ ಯಾವ ತೀರ್ಮಾನ ಬೇಕಾದರೂ‌ ತೆಗೆದುಕೊಳ್ಳಲಿ. ಸದ್ಯ ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷದ ಸ್ಮರಣೆ ಕಾರ್ಯಕ್ರಮ, ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮ ಕುರಿತು ಕಾಲ್ನಡಿಗೆ, ಜಾಥಾ, ಕಾರ್ಯಕ್ರಮಗಳತ್ತ ನಾವು ಗಮನಹರಿಸಿದ್ದೇವೆ. ಮೂರು ದಿನ ಸುಮ್ಮನೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!