ಹೊಸದಿಗಂತ ವರದಿ ಕಲಬುರಗಿ:
ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಲಂಚ ಮಂಚದ ಸರ್ಕಾರ ಎಂಬ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದರು. ಪ್ರಿಯಾಂಕ್ ಖಗೆ೯ ಅವರೇ ನಿಮಗೆ ಜನ್ಮವನ್ನು ಕೊಟ್ಟು, ಸಂಸ್ಕಾರವನ್ನು ನೀಡಿದ ತಾಯಿ ಕೂಡ ಒಬ್ಬ ಹೆಣ್ಣು ಮಗಳೇ ಎಂಬುದನ್ನು ತಾವು ಮರೆಯಬಾರದು ಎಂದು ಬಿಜೆಪಿ ರಾಜ್ಯ ಮಹಿಳಾ ಮೋಚಾ೯ದ ಉಪಾಧ್ಯಕ್ಷೆ ಲಲಿತಾ ಅನಪೂರ ಹೇಳಿದರು.
ನಮ್ಮ ದೇಶದಲ್ಲಿ ಹೆಣ್ಣನ್ನು ಭಾರತ ಮಾತೆ, ಕನ್ನಡಾಂಬೆಗೆ ಹೋಲಿಕೆ ಮಾಡಲಾಗುತ್ತದೆ. ಇಂತಹ ತಾಯಿ ಸ್ವರೂಪಳಾದ ಹೆಣ್ಣಿನ ಬಗ್ಗೆ ನಿಮ್ಮ ಹೇಳಿಕೆ ನಿಜಕ್ಕೂ ನೋವಿನ ಸಂಗತಿ. ನಿಮ್ಮ ಈ ರೀತಿಯ ಹೇಳಿಕೆ ಮತ್ತು ವತ೯ನೆಯಿಂದಲೇ ನಿಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಕಾರಣವಾಗಿದೆ. ನಿಮಗೆ ಸಂಸ್ಕಾರ ನೀಡಿದ ತಾಯಿಯ ಸ್ವರೂಪವಾಗಿರುವ ಹೆಣ್ಣನ್ನು ನೀವು ಈ ವಿಷಯದಲ್ಲಿ ಎಳೆದುಕೊಂಡು ಬಂದಿದ್ದು, ನಿಮ್ಮ ಸವ೯ನಾಶಕ್ಕೆ ಕಾರಣವಾಗಲಿದೆ ಎಂದು ಹೇಳಿದ ಅವರು, ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಜನಪ್ರತಿನಿಧಿಗಳಾದವರು ತೂಕ ಮಾಡಿ ಮತ್ತು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ಸುಮ್ಮನೆ ಪ್ರಚಾರ ಪಡೆಯಲು ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲವೆಂದು ಹೇಳಿದರು.