ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಯದುವೀರ್ ರಾಜರ ಬಾಯಿಂದ ರಾಜರ ಕಥೆಗಳು ಎನ್ನುವ ಹೆಸರಿನಲ್ಲಿ ರೇಡಿಯೋ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಈ ಕೂಡಲೇ ನಿಲ್ಲಿಸಿ ಎಂದು ಕರ್ನಾಟಕ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ರೇಡಿಯೋದಲ್ಲಿ ಈ ಕಾರ್ಯಕ್ರಮ ಬರುತ್ತಿದೆ ಎಂದು ಹೇಳೋದಕ್ಕೂ ನಿಮಿಷ ನಿಮಿಷಕ್ಕೆ ಜಾಹೀರಾತು ಇಟ್ಟಿದ್ದಾರೆ. ವ್ಯಕ್ತಿಯಾಗಿ ರಾಜರ ಕಥೆಗಳನ್ನು ಹೇಳಲಿ ತಪ್ಪಿಲ್ಲ ಆದರೆ ಈಗ ಚುನಾವಣೆ ಸಂದರ್ಭದಲ್ಲಿ ಇದು ಅಪ್ರಸ್ತುತ. ಇಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎ. ವೆಂಕಟೇಶ್ ದೂರು ನೀಡಿದ್ದಾರೆ.