ಹೊಸದಿಗಂತ ವರದಿ,ಗದಗ:
ಆಯೋದ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿರುವದನ್ನು ಕಾಂಗ್ರೆಸ್ನವರು ಸಹಿಸದೆ ಗಂಡಾಂತರ ನಿರ್ಮಾಣ ಮಾಡುವಂತಹ ಮತ್ತು ಪ್ರಚೋಧನೆ ಕೊಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹರಿಹಾಯ್ದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಹೇಳಿಕೆ ಅತ್ಯಂತ ಖಂಡನೀಯವಾಗಿದೆ. ಅಯೋಧ್ಯದಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಆಗುತ್ತಿರುವದಕ್ಕೆ ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಗೋದ್ರಾ ಮಾದರಿಯಲ್ಲೇ ಘಟನೆಯಾಗುತ್ತೆ ಎನ್ನುವುದು ಇವರಿಗೆಲ್ಲೊ ಮಾಹಿತಿ ಇದೆ. ಇವರಿಗೆ ಸಾಕ್ಷಿ ಸಿಕ್ಕಿದೆ. ಈ ಬಗ್ಗೆ ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು ಎಂದು ಆಖ್ರೋಶ ವ್ಯಕ್ತ ಪಡೆಸಿದರು.
ಗೋದ್ರಾ ಘಟನೆಯಲ್ಲಿ ೫೭ ಜನರನ್ನು ಮುಸ್ಲೀಮರು ಜೀವಂತ ಸುಟ್ಟು ಹಾಕಿದ್ದಾರೆ. ಹಾಗಾದರೆ ಮುಸ್ಲೀಮರಿಗೆ ಕಾಂಗ್ರೆಸ್ನವರು ಪ್ರಚೋದನೆ ಕೊಡುತ್ತಿದ್ದಾರಯೇ? ಅಥವಾ ಮುಂದೆ ಮುಸ್ಲಿಮರು ಮಾಡುವ ಕೆಲಸ ಹರಿಪ್ರಸಾದ್ ಅವರಿಗೆ ಗೊತ್ತಾಗಿದೆಯಾ.? ಅಥವಾ ಇವರೆ ಗಲಭೆಗೆ ಪ್ಲಾನ್ ಮಾಡಿರುವ ಮಾಡಿರುವಂತಿದೆ. ಗೃಹ ಮಂತ್ರಿಗಳು ಕೂಡಲೆ ಬಿ.ಕೆ. ಹರಿಪ್ರಸಾದ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು. ರಾಮಮಂದಿರ ಉದ್ಘಾಟನೆಯನ್ನು ಕಣ್ತುಂಬಿಕೊಳ್ಳಲು ಜನರು ಸಂತಸದಲ್ಲಿದ್ದಾರೆ ಅದನ್ನು ಕಾಂಗ್ರೆಸ್ ನವರು ಸಹಿಸಿಕೊಳ್ಳುತ್ತಿಲ್ಲ ಮುಂದಿನ ದಿನಗಳಲ್ಲಿ ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಗೃಹ ಮಂತ್ರಿ ಹಾಗೂ ಸಿದ್ದರಾಮಯ್ಯ ಅವರೇ ಹೊಣೆಗಾರರಾಗುತ್ತಾರೆ ಎಂದು ಪ್ರಮೋದ ಮುತಾಲಿಕ ಅವರು ಹೇಳಿದರು.