ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಲಾಗಿದೆ. ಚಿಕ್ಕೋಡಿಯಲ್ಲಿ ಜೈನ ವಿದ್ವಾಂಸನೊಬ್ಬನ ಹತ್ಯೆಯಾಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ. ಈ ಸ್ಫೋಟವನ್ನು ಕಾಂಗ್ರೆಸ್ ಸಿಲಿಂಡರ್ ಸ್ಫೋಟ ಎಂದು ಕರೆದಿದೆ. ಮತ ಸೆಳೆಯಲು ಕಾಂಗ್ರೆಸ್ ತುಷ್ಟೀಕರಣದ ಪ್ರಯತ್ನ ನಡೆಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ. ದೇಶವಿರೋಧಿ ಸಂಘಟನೆಯಾದ ಪಿಎಫ್ಐ ಕಾಂಗ್ರೆಸ್ಗೆ ಬೆಂಬಲ ನೀಡಿದೆ ಎಂದು ಕಿಡಿಕಾರಿದರು
ಭಾರತ ಅಭಿವೃದ್ಧಿಯಾದರೆ ಪ್ರತಿಯೊಬ್ಬ ಭಾರತೀಯನೂ ಸಂತೋಷವಾಗಿರುತ್ತಾನೆ. ಆದರೆ ಕಾಂಗ್ರೆಸ್ ಎಂದಿಗೂ ಸಂತೋಷವಾಗಿಲ್ಲ. ಕೊರೊನಾ ವ್ಯಾಕ್ಸಿನೇಷನ್ ತಿರಸ್ಕರಿಸಿದ ಕಾಂಗ್ರೆಸ್. ಬಿಜೆಪಿಯವರ ಲಸಿಕೆ ಎಂದು ಹೇಳಿದರು. ಭಾರತದ ಯಶಸ್ಸನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.