Tuesday, March 28, 2023

Latest Posts

ಕಾಂಗ್ರೆಸ್ ಜಾತ್ಯತೀತ ಪಕ್ಷ, ಸಂವಿಧಾನದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

ಹೊಸದಿಗಂತ ವರದಿ ವಿಜಯಪುರ: 

ಕಾಂಗ್ರೆಸ್ ಜಾತ್ಯತೀತ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಬಿಜೆಪಿಯವರು ಸಂವಿಧಾನದ ಬಗ್ಗೆ ನಂಬಿಕೆ, ಗೌರವ ಇಲ್ಲದಂತಹವರು. ಸಂವಿಧಾನಕ್ಕೆ ವಿರುದ್ಧವಾಗಿರುವಂತಹ ಪಕ್ಷ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಅಲ್ಲದೆ ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ. ಇವರಿಬ್ಬರು ಸೇರಿ ಸರ್ಕಾರ ಮಾಡಿದ್ದರಲ್ಲ ಅದು ಹೇಗೆ ಒಂದಾಗಲಿಕ್ಕೆ ಆಗತ್ತದೆ ಎಂದರು.

ಟಿಪ್ಪು ಸುಲ್ತಾನ್ ಕೂಡ ಓರ್ವ ದೇಶದ ಭಕ್ತ. ಅದಕ್ಕಾಗಿ ನಾವು ಟಿಪ್ಪುವನ್ನು ಗೌರವಿಸುತ್ತೇವೆ ಎಂದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರು ಎಂದು ಶ್ರದ್ಧೆ, ಭಕ್ತಿಯಿಂದ ಗೌರವಿಸುತ್ತೇವೆ.‌ ಬಿಜೆಪಿಗರು ಗೊಡ್ಸೆ ಪೂಜೆ ಮಾಡುವವರು. ಅವರೇನು ನಮಗೆ ಪಾಠ ಮಾಡುತ್ತಾರೆ. ಮಹಾತ್ಮ ಗಾಂಧಿ ಕೊಂದವರನ್ನು ಪೂಜಿಸುವರನ್ನು ಏನು ಮಾಡಬೇಕು. ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮಾಡಿದವನು ನಾನು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!