ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಗೆ (BJP) ಸೇರ್ಪಡೆಗೊಂಡ ಕೇರಳದ ಮಾಜಿ ಕಾಂಗ್ರೆಸ್ ನಾಯಕ ಅನಿಲ್ ಆಂಟನಿ (Anil Antony) ಇಂದು ಟ್ವಿಟರ್ನಲ್ಲಿ (Twitter) ತನ್ನನ್ನು ಅನ್ಫಾಲೋ ಮಾಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕೇಳಿದ್ದಕ್ಕಾಗಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನ ಕೇರಳ ಘಟಕದ ಅವನತಿಗೆ ಒಂದು ಕಾರಣವೆಂದರೆ ಅದು ವಾಸ್ತವಗಳಿಂದ ದೂರವಿರುವುದು.ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜನರು ಯೋಜನೆ ಮತ್ತು ಮಾಹಿತಿಯ ಆಧಾರದ ಮೇಲೆ ತಿಳುವಳಿಕೆಯುಳ್ಳ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಜನರು ಟ್ವಿಟರ್ನಲ್ಲಿದ್ದಾರೆ ಎಂದು ಅನಿಲ್ ಆಂಟನಿ ಹೇಳಿದ್ದಾರೆ.
ಜನರು ಸಾಮಾನ್ಯವಾಗಿ ಟ್ವಿಟ್ಟರ್ನಲ್ಲಿ ನಿಲುವು ನೋಡುತ್ತಾರೆ, ವಿಭಿನ್ನ ಜನರು ಏನನ್ನು ಯೋಚಿಸುತ್ತಾರೆ ಎಂಬುದರ ಕುರಿತು ಕೆಲವು ಕಲ್ಪನೆ ಮತ್ತು ಮಾಹಿತಿಯನ್ನು ಪಡೆಯಲು ನೋಡುತ್ತಾರೆ. ಇದು ತಿಳುವಳಿಕೆಯುಳ್ಳ ಅಭಿಪ್ರಾಯಗಳನ್ನು ಮಾಡಲು ಸಹಾಯ ಮಾಡುತ್ತದೆ. ನೀವು ವಿಭಿನ್ನ ನಿಲುವು ಹೊಂದಿರುವ ವ್ಯಕ್ತಿಗಳನ್ನು ಫಾಲೋ ಮಾಡದಿದ್ದಾಗ ಮತ್ತು ಒಂದೇ ರೀತಿಯ ನಿಲುವು ಹೊಂದಿರುವವರನ್ನು ಮಾತ್ರ ಫಾಲೋ ಮಾಡುತ್ತಿದ್ದರೆ ವಾಸ್ತವ ಸ್ಥಿತಿಯಿಂದ ದೂರವಾಗಿರುವ ಪ್ರತಿಧ್ವನಿ ತುಂಬಿದ ಚೇಬಂರ್ನಂತೆ ಅದಾಗುತ್ತದೆ. ದ ಕಾಂಗ್ರೆಸ್ ಈಗ ಏನಾಗಿದೆಯೇ ಎಂಬುದಕ್ಕೆ ಇದೂ ಮುಖ್ಯ ಕಾರಣಗಳಲ್ಲಿ ಒಂದು ಎಂದು ಅನಿಲ್ ಆಂಟನಿ ಹೇಳಿದ್ದಾರೆ.
ಕೇರಳದ ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಟಿ ಸಿದ್ದಿಕ್ ಅವರು ಅನಿಲ್ ಆಂಟನಿ ಅವರನ್ನು ಅನ್ ಫಾಲೋ ಮಾಡಿ ಎಂದು ಪಕ್ಷದ ಕಾರ್ಯಕರ್ತರಲ್ಲಿ ಹೇಳಿರುವ ಟ್ವೀಟ್ಗೆ ಅನಿಲ್ ಪ್ರತಿಕ್ರಿಯಿಸಿದ್ದಾರೆ .