ಪಂಜಾಬ್‌ ಎಲೆಕ್ಷನ್‌ ಫೈಟ್:‌ ಕಾಂಗ್ರೆಸ್ ಸಿಎಂ‌ ಅಭ್ಯರ್ಥಿ ಆಯ್ಕೆ ತಪ್ಪು- ಅಮರಿಂದರ್‌ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್‌ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ ಚರಣ್ ಜಿತ್‌ ಚನ್ನಿ ಅವರನ್ನು ಘೋಷಿಸಿರುವುದು ಕಾಂಗ್ರೆಸ್‌ ಮಾಡಿದ ಅತಿ ದೊಡ್ಡ ತಪ್ಪು ಎಂದು ಮಾಜಿ ಸಿಎಂ, ಪಂಜಾಬ್ ಲೋಕ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಅಮರಿಂದರ್‌ ಸಿಂಗ್‌ ಆರೋಪ ಮಾಡಿದ್ದಾರೆ.
ಚರಣ್‌ ಜಿತ್‌ ಸಿಂಗ್‌ ಚನ್ನಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿರುವುದು ತಪ್ಪು. ಪಂಜಾಬ್‌ ಎಂದಿಗೂ ಜಾತಿ, ಧರ್ಮದ ಮೇಲೆ ವಿಭಜನೆಯಾಗಿಲ್ಲ. ಚನ್ನಿ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ
ಮುಖ್ಯಮಂತ್ರಿಯಾದ ಕೇವಲ 111 ದಿನಗಳಲ್ಲಿ ಎಲ್ಲಾ ಕೆಲಸ ಮಾಡಿದ್ದೇವೆ ಎಂದು ಚನ್ನಿ ಹೇಳಿರುವುದು ಸುಳ್ಳು. ಪ್ರತಿ ಯೋಜನೆಯೂ ಕಾರ್ಯರೂಪಕ್ಕೆ ತರಲು ತಿಂಗಳುಗಳ ಕೆಲಸ ಅಗತ್ಯವಿರುತ್ತೆ. ಚನ್ನಿ ಅವರು ಹೇಳಿಕೊಳ್ಳುತ್ತಿರುವ ಸಾಧನೆಯ ಯೋಜನೆಗಳು ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಆರಂಭವಾಗಿತ್ತು ಎಂದು ಹೇಳಿದರು.
ಕಾಂಗ್ರೆಸ್‌ ನ ಈ ನಡೆಯ ವಿರುದ್ಧ ಪಂಜಾಬ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಸದ್ಯದಲ್ಲೇ ಬಂಡಾಯ ಏಳುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!