ಇದು ಸುದೀರ್ಘ ಯುದ್ಧ, ನಾನು ಹೋರಾಡಲು ಸಿದ್ಧ : ಪವನ್‌ ಖೇರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಪಾದಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ಗುರುವಾರ ಬಂಧಿಸಿದರು. ಈ ವೇಳೆ ಅವರು “ಇದೊಂದು ದೀರ್ಘ ಯುದ್ಧ, ಇದನ್ನು ಎದುರಿಸಲು ಸಿದ್ಧ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪವನ್ ಖೇರಾ ಅವರನ್ನು ಪಕ್ಷದ ಸಮಗ್ರ ಅಧಿವೇಶನದಲ್ಲಿ ಭಾಗವಹಿಸಲು ರಾಯ್‌ಪುರಕ್ಕೆ ಹೊರಟಿದ್ದ ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

ಅಸ್ಸಾಂ ಪೊಲೀಸರ ಆದೇಶದ ಮೇರೆಗೆ ಖೇರಾ ರಾಯ್‌ಪುರಕ್ಕೆ ಹಾರುವುದನ್ನು ತಡೆಯಲಾಗಿದೆ. ಕಾಂಗ್ರೆಸ್ ನಾಯಕನನ್ನು ಬಂಧಿಸಲು ವಿಮಾನ ನಿಲ್ದಾಣ ಪೊಲೀಸರು ಮತ್ತು ಅಸ್ಸಾಂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!