ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಿದ್ದ ಸಂಬಂಧ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರ್.ರಾಜೇಂದ್ರ ಅವರು ತಮ್ಮ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಡಿಜಿ ಮತ್ತು ಐಜಿಪಿ ಭೇಟಿಯಾಗಿ ದೂರು ನೀಡಿದ್ದರು. ಬಳಿಕ ತುಮಕೂರು ಎಸ್ಪಿಗೂ ದೂರು ನೀಡಿದ್ದರು. ಈ ದೂರು ಆಧರಿಸಿ ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಎ1 ಆರೋಪಿಯಾಗಿಸಿ ಸೋಮು, ಎ2 ಭರತ್, ಎ3 ಅಮಿತ್, ಎ4 ಗುಂಡ ಹಾಗೂ ಎ5 ಯತೀಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅನಾಮಧೇಯ ಮೂಲಗಳಿಂದ ಆಡಿಯೋಸಿಕ್ಕಿದ್ದು, ಅದರಲ್ಲಿ ಎಂಎಲ್ಸಿ ರಾಜೇಂದ್ರ ಹತ್ಯೆ ಪ್ರಕರಣ ಬಹಿರಂಗಗೊಂಡಿತ್ತು. ಸುಫಾರಿಯ ಬಗ್ಗೆ ಆಡಿಯೋದಲ್ಲಿ ಮಾತುಕತೆ ನಡೆಸಿದ್ದರು.