ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಲ್ಲಿ ಸಂಭವಿಸಿದ ‘ಕುಕ್ಕರ್ ಬಾಂಬ್’ ಸ್ಫೋಟದ ಆರೋಪಿ ಮುಹಮ್ಮದ್ ಶಾರಿಕ್ ಭಾರೀ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದ ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯಗಳು ದೊರೆತಿವೆ.
ಕುಕ್ಕರ್ಬಾಂಬ್ ಸರಿಯಾಗಿ ಸ್ಫೋಟಗೊಂಡಿದ್ದರೆ ಮಂಗಳೂರಿನಲ್ಲಿ ಶನಿವಾರ ಸಂಜೆ ರಕ್ತದ ಹೊಳೆಯೇ ಹರಿಯುತ್ತಿತ್ತು. ಅಲ್ಲದೆ ಕುಕ್ಕರ್ ಬಾಂಬ್ ಒಂದು ಬಸ್ ಅನ್ನು ಸುಟ್ಟು ಬೂದಿ ಮಾಡುವಷ್ಟು ಶಕ್ತಿಶಾಲಿಯಾಗಿತ್ತು. ವಿಧ್ವಂಸಕ ಕೃತ್ಯದ ಹಿಂದೆ ಅಡಗಿರುವ ಸಂಚನ್ನು ಭೇದಿಸಲು ಬೆನ್ನು ಹತ್ತಿರುವ ತನಿಖಾ ದಳಕ್ಕೆ ಈಗ ಕೆಲವೊಂದು ಅಘಾತಕಾರಿ ಮಾಹಿತಿ ಲಭ್ಯವಾಗತೊಡಗಿದೆ.
ಶಾರಿಕ್ ಟಾರ್ಗೆಟ್ ಮಾಡಿದ್ದು ಮಂಗಳೂರು ಜನನಿಬಿಡ ಪ್ರದೇಶದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ್ದು ಒಂದಾದರೆ ಮತ್ತೊಂದೆಡೆ ಆತ ಪ್ರಭಾವಿ ನಾಯಕರ ಹತ್ಯೆಗೆ ಭಾರೀ ಸಂಚು ನಡೆಸಿದ್ದನೇ ಎಂಬುದನ್ನೂ ತನಿಖಾದಳ ಈಗ ಗಂಭೀರವಾಗಿ ಪರಿಶೀಲಿಸುತ್ತಿದೆ.