‘ಗೌರವದಿಂದ ಕರೆದು ಟಿಕೆಟ್ ಇಲ್ಲ ಎಂದು ಹೇಳಬಹುದಿತ್ತಲ್ವಾ? ನನ್ನ ವಿರುದ್ಧ ಪಿತೂರಿ ಮಾಡಿದ ಬಿಜೆಪಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂರು ದಶಕಗಳಿಂದ ಬಿಜೆಪಿಯಲ್ಲಿದ್ದು, ಆರು ಬಾರಿ ಶಾಸಕರಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಸೇರಿದ್ದಾರೆ.

ಬಿಜೆಪಿಯಲ್ಲಿ ನನಗೆ ಅನ್ಯಾಯವಾಗಿದೆ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಪ್ರತೀ ಚುನಾವಣೆಯಲ್ಲಿ ಗೆದ್ದಿದ್ದೇನೆ, ವರ್ಷಾನುಗಟ್ಟಲೆ ಕೆಲಸ ಮಾಡಿದ್ದೇನೆ, ನನಗೆ ಟಿಕೆಟ್ ಇಲ್ಲ ಎಂದರೆ ಹೇಗೆ? ಹಿರಿಯ ನಾಯಕನನ್ನು ಹೀಗೆ ನೋಡಿಕೊಳ್ತಾರಾ? ವಾರಕ್ಕಿಂತ ಮುಂಚೆ ಕರೆಸಿ, ಸನ್ನಿವೇಶ ವಿವರಿಸಿ ಟಿಕೆಟ್ ಇಲ್ಲ ಎನ್ನಬೇಕಿತ್ತು ಎಂದಿದ್ದಾರೆ.

ಹಠಕ್ಕೆ ಬಿದ್ದು ಶಾಸಕನಾಗುವ ಅವಶ್ಯಕತೆ ಇಲ್ಲ, ಎಂದಿಗೂ ಅಧಿಕಾರದ ಹಿಂದೆ ಬಿದ್ದ ವ್ಯಕ್ತಿ ನಾನಲ್ಲ, ಎರಡನೇ ಪಟ್ಟಿಯಲ್ಲೂ ನನ್ನ ಹೆಸರಿಲ್ಲ, ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಒತ್ತಾಯವಾಗಿ ನನ್ನನ್ನು ಪಕ್ಷಿದಂ ಹೊರ ಹಾಕಿದ್ದಾರೆ. ಕೆಲವೇ ವ್ಯಕ್ತಿಗಳು ಬಿಜೆಪಿಯನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ, ಅವರು ಹೇಳಿದಂತೆ ಟಿಕೆಟ್ ಹಂಚಿಕೆಯಾಗಿದೆ. ನೋವು ಕೊಟ್ಟಾಗಿದೆ, ಈಗ ಸರಿಮಾಡೋದಕ್ಕೆ ಆಗೋದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!