Tuesday, March 28, 2023

Latest Posts

ಧಾರವಾಡದ ಗುಡಿಗೇರಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕ್ಷಣಗಣನೆ

ಹೊಸದಿಗಂತ ವರದಿ ಕುಂದಗೋಳ:

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಗುಡಿಗೇರಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಗ್ರಾಮದ ದ್ಯಾಮ್ಮವ್ವನ ದೇವಸ್ಥಾನ ಎದುರು ವಿಜಯ ಸಂಕಲ್ಪ ಯಾತ್ರೆ ರಥ ಸಿದ್ಧವಾಗಿದೆ.
ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ. ರವಿ ಚಾಲನೆ‌ ನೀಡಲಿದ್ದು, ಬಿಜೆಪಿ‌ ಕುಂದಗೋಳ ಕ್ಷೇತ್ರದ ಮುಖಂಡರಾದ ಎಂ.ಆರ್. ಪಾಟೀಲ, ಎಸ್.ಐ ಚಿಕ್ಕನಗೌಡ ಸಾಥ ನೀಡಲಿದ್ದಾರೆ.

ಮಹಿಳಾ ತಂಡ ಡೊಳ್ಳು ಕುಣಿತ, ಹಲಗೆ, ಸಕಲ ವಾದ್ಯ ಮೇಳಗಳು ರಥಯಾತ್ರೆಗೆ ಮೆರಗು ನೀಡಲಿವೆ. ಗುಡಗೇರಿ ಗ್ರಾಮದ ಕಾಂಗ್ರಿಲ್ ವೃತ್ತದಿಂದ ಗ್ರಾಮದ ಅಂಚೆ ಕಚೇರಿ ವರೆಗೂ ರಥಯಾತ್ರೆ ನಡೆಯಲಿದೆ.
ಸಚಿವ ಸಿ.ಸಿ.ಪಾಟೀಲ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಧಾನ‌ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳ ಮಠ ಭಾಗವಹಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!