ನನ್ನ ವಿರುದ್ಧ ಚಕ್ರವ್ಯೂಹ ರಚಿಸಿದ್ದಾರೆ: ಬಿಜೆಪಿ, ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಜಾರಿ ನಿರ್ದೇಶನಾಲಯವು ತನ್ನ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ.

ನನ್ನ ವಿರುದ್ಧ ದಾಳಿಯನ್ನು ಯೋಜಿಸಲಾಗುತ್ತಿದೆ ಎಂದು ಇಡಿ ತಿಳಿಸಿದ್ದರಿಂದ ಕೇಂದ್ರ ತನಿಖಾ ಸಂಸ್ಥೆಗಾಗಿ ಮುಕ್ತ ಮನಸ್ಸಿನಿಂದ ಕಾಯುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

2024-25ರ ಯೂನಿಯನ್ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದ ‘ಚಕ್ರವ್ಯೂಹ’ ಪರಿಕಲ್ಪನೆಯನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮೇಲೆ ದಾಳಿ ಮಾಡಲು ಬಳಸಿದ್ದಾರೆ.

21ನೇ ಶತಮಾನದಲ್ಲಿ ಮತ್ತೊಂದು ‘ಚಕ್ರವ್ಯೂಹ’ ತಯಾರಾಗಿದೆ. ಅದು ಕಮಲದ ರೂಪದಲ್ಲಿದ್ದು ಪ್ರಧಾನಿ ಎದೆಯ ಮೇಲೆ ಚಿನ್ಹೆಯನ್ನು ಧರಿಸಿದ್ದಾರೆ. ಅಭಿಮನ್ಯುವಿಗೆ ಮಾಡಿದ್ದನ್ನು ಭಾರತ, ಯುವಕರು, ಮಹಿಳೆಯರು, ರೈತರೊಂದಿಗೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!