ಹೊಸದಿಗಂತ ವರದಿ ಬಸವನಬಾಗೇವಾಡಿ:
ತಾಲೂಕಿನ ಉಕ್ಕಲಿ ಗ್ರಾಮದ (ಸಿಆರ್ ಪಿಎಫ್) ಯೋಧ ಶ್ರೀಶೈಲ ಯಮನಪ್ಪ ಹೀರೋಡಗಿ (CRPF) ಇವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ದೆಹಲಿಯಲ್ಲಿ ವೀರ್ ಮರಣ ಹೊಂದಿದ್ದಾರೆ.
ಏ.18 ರಂದು ಶುಕ್ರವಾರ ಬೆಳಗ್ಗೆ 8-30ಕ್ಕೆ ಗಂಟೆಗೆ ಯೋಧನ ಪಾರ್ಥಿವ ಶರೀರ ಬೆಳಗಾವಿಗೆ ಆಗಮಿಸಲಿದ್ದು ನಂತರ ಬೆಳಗಾವಿಯಿಂದ ಉಕ್ಕಲಿ ಗ್ರಾಮಕ್ಕೆ ಮದ್ಯಾಹ್ನ 12-30ಕ್ಕೆ ಆಗಮಿಸಲಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುವುದು ನಂತರ ಸರಕಾರಿ ಸಕಲ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ವೈ. ಎಸ್. ಸೋಮನಕಟ್ಟಿ ತಿಳಿಸಿದ್ದಾರೆ.