ದೆಹಲಿಯಲ್ಲಿ ಉಕ್ಕಲಿ ಗ್ರಾಮದ ಸಿಆರ್ ಪಿಎಫ್ ಯೋಧ ಹೃದಯಾಘಾತದಿಂದ

ಹೊಸದಿಗಂತ ವರದಿ ಬಸವನಬಾಗೇವಾಡಿ:

ತಾಲೂಕಿನ ಉಕ್ಕಲಿ ಗ್ರಾಮದ (ಸಿಆರ್ ಪಿಎಫ್) ಯೋಧ ಶ್ರೀಶೈಲ ಯಮನಪ್ಪ ಹೀರೋಡಗಿ (CRPF) ಇವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ದೆಹಲಿಯಲ್ಲಿ ವೀರ್ ಮರಣ ಹೊಂದಿದ್ದಾರೆ.

ಏ.18 ರಂದು ಶುಕ್ರವಾರ ಬೆಳಗ್ಗೆ 8-30ಕ್ಕೆ ಗಂಟೆಗೆ ಯೋಧನ ಪಾರ್ಥಿವ ಶರೀರ ಬೆಳಗಾವಿಗೆ ಆಗಮಿಸಲಿದ್ದು ನಂತರ ಬೆಳಗಾವಿಯಿಂದ ಉಕ್ಕಲಿ ಗ್ರಾಮಕ್ಕೆ ಮದ್ಯಾಹ್ನ 12-30ಕ್ಕೆ ಆಗಮಿಸಲಿದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುವುದು ನಂತರ ಸರಕಾರಿ ಸಕಲ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್  ವೈ. ಎಸ್. ಸೋಮನಕಟ್ಟಿ ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!