ದಿನ ಭವಿಷ್ಯ: ಈ ರಾಶಿಯವರಿಗೆ ಪ್ರೀತಿಪಾತ್ರರ ಧ್ಯಾನದಲ್ಲಿ ಮುಳುಗುವ ಸಮಯ!

ಮೇಷ
ಪ್ರೀತಿಪಾತ್ರರ ಧ್ಯಾನದಲ್ಲಿ ಮುಳುಗುತ್ತೀರಿ. ಭಾವಾವೇಶಕ್ಕೆ ಒಳಗಾಗುವಿರಿ. ಇದರಿಂದ ಇತರ ಕೆಲಸಗಳು ಹಿನ್ನೆಲೆಗೆ ಸರಿಯಬಹುದು.

ವೃಷಭ
ನಿಮ್ಮ ಸುತ್ತಲಿನವರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ತಪ್ಪು ಅಭಿಪ್ರಾಯ ಮೂಡಿಸಿಕೊಂಡು ಸಂಬಂಧ ಕಡಿದುಕೊಳ್ಳದಿರಿ.

ಮಿಥುನ
ವೃತ್ತಿಯಲ್ಲಿ ಹಿನ್ನಡೆ ಅನುಭವಿಸುವಿರಿ. ಕೆಲವು ಪ್ರತಿಕೂಲ ಬೆಳವಣಿಗೆ. ಹಣದ ವಿಚಾರವಾಗಿ ದುಡುಕಿನ ನಿರ್ಧಾರ ತಾಳದಿರಿ. ಆಲೋಚಿಸಿ ನಿರ್ಧರಿಸಿ.

ಕಟಕ
ಪ್ರೀತಿಪಾತ್ರರಿಗೆ ನಿಷ್ಠರಾಗಿರಿ. ಅವರ ಮೇಲೆ ವಿಶ್ವಾಸ ಹೊಂದಿರಿ. ಅವರ ಕಾರ್ಯದಲ್ಲಿ ಕುಂದು ಹುಡುಕಬೇಡಿ. ಸಂಬಂಧ ಉಳಿಸಿಕೊಳ್ಳಿ.

ಸಿಂಹ
ಸಂಗಾತಿಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ಪರಿಹರಿಸಲು ಆದ್ಯತೆ ಕೊಡಿ. ಬಿರುಕು ಹೆಚ್ಚಾಗದಂತೆ ನೋಡಿಕೊಳ್ಳಿ.

ಕನ್ಯಾ
ಅದೃಷ್ಟ ನಿಮ್ಮೊಂದಿಗಿದೆ. ಕಾರ್ಯದಲ್ಲಿ ಸಫಲತೆ. ಆಪ್ತರ ಜತೆಗಿನ ಸಂಬಂಧ ಗಟ್ಟಿಗೊಳ್ಳುವುದು. ಕಷ್ಟೆನಿಸಿದ್ದ ಕೆಲಸವೊಂದು ಸುಲಭದಲ್ಲಿ ಮುಗಿಯುವುದು.

ತುಲಾ
ಕ್ಲಿಷ್ಟಕರ ಪರಿಸ್ಥಿತಿ ಒದಗಬಹುದು. ಹಿತೈಷಿಗಳ ನೆರವಿನಿಂದ ಅದನ್ನು ನಿಭಾಯಿಸು ವಿರಿ. ಕೆಲವರ ಮಾತುಗಳು ನಿಮ್ಮನ್ನು ಘಾಸಿಗೊಳಿಸಬಹುದು

ವೃಶ್ಚಿಕ
ಅತೀವ ಸಹನೆಯನ್ನು ಇಂದು ಪ್ರದರ್ಶಿಸುವಿರಿ. ಕೆಲವರ ತಪ್ಪುಗಳನ್ನು ಮನ್ನಿಸುವ ಪ್ರಸಂಗ ಒದಗುವುದು. ಇಲ್ಲವಾದರೆ ಸಂಘರ್ಷ ನಡೆದೀತು.

ಧನು
ನಿಮ್ಮ ಭವಿಷ್ಯಕ್ಕೆ ಅನುಕೂಲ ತರಬಲ್ಲ ಮಹತ್ವದ ಕಾರ್ಯ ಸಾಸುವಿರಿ. ಆರ್ಥಿಕ ಹೂಡಿಕೆಯು ಉತ್ತಮ ಫಲ ನೀಡುವುದು. ಕೌಟುಂಬಿಕ ಸಂತೃಪ್ತಿ.

ಮಕರ
ವೃತ್ತಿಗೆ ಸಂಬಂಸಿ ಹಲವಾರು ಕಾರ್ಯ ಗಳು ಇಂದು ನಿಮ್ಮ ಆದ್ಯತೆ ಬೇಡುತ್ತವೆ. ಅವನ್ನು ಕಡೆಗಣಿಸಬೇಡಿ. ಎಲ್ಲದಕ್ಕೂ ಗಮನ ಕೊಡುವುದು ಒಳಿತು.

ಕುಂಭ
ನಿಮ್ಮ ಕಾರ್ಯ ಅಥವಾ ಮಾತು ಇತರರ ಮನ ನೋಯಿಸಬಹುದು. ಹಾಗಾಗಿ ಮಾತಾಡುವ ಮುನ್ನ ಯೋಚಿಸಿರಿ. ಕೌಟುಂಬಿಕ ಒತ್ತಡ ಕಡಿಮೆಯಾಗುವುದು.

ಮೀನ
ನಿಮ್ಮ ಆದ್ಯತೆ ಏನೆಂದು ಮೊದಲು ನಿರ್ಧರಿಸಿಕೊಳ್ಳಿ. ಕಾರ್ಯ ಆಗದಿದ್ದರೆ ಬೇಗನೆ ಹತಾಶೆಗೆ ಗುರಿಯಾಗದಿರಿ. ಮರಳಿ ಯತ್ನ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!