ದಿನಭವಿಷ್ಯ: ಶನಿವಾರದ ದಿನ ಯಾವ ರಾಶಿಗೆ ಏನು ಫಲ?

ಮೇಷ
ಸಮಸ್ಯೆಯೊಂದರ ಪರಿಹಾರ. ಚಿಂತೆ ಮಾಯ. ಇತರರ ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಿದರೆ ಎಲ್ಲವೂ ಸುಗಮ.

ವೃಷಭ
ವೃತ್ತಿಯಲ್ಲಿ ಹೊಸ ಸವಾಲು. ನಿಮ್ಮಿಂದ ತಪ್ಪು ಘಟಿಸಬಹುದು. ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಕೆಲವರ ಅಸಹಕಾರ ಹೆಚ್ಚುವುದು.

ಮಿಥುನ
ಅಗತ್ಯಕ್ಕೆ ತಕ್ಕಂತೆ ಕ್ಷಿಪ್ರ ನಿರ್ಧಾರ ತಾಳುವಲ್ಲಿ ಸಫಲರಾಗುವಿರಿ. ಇದರಿಂದ ಕಾರ್ಯಗಳು ಸುಲಲಿತ. ಕೌಟುಂಬಿಕ ಭಿನ್ನಾಭಿಪ್ರಾಯ ನಿವಾರಣೆಯಾಗುವುದು.

ಕಟಕ
ಬಾಕಿ ಉಳಿದಿರುವ ಕಾರ್ಯ ಮುಗಿಸಿರಿ. ಬಳಿಕ ನಿರಾಳವಾಗಿರ ಬಹುದು. ಉದ್ಯೋಗ ದಲ್ಲಿ ನಿಮಗೆ ಪೂರಕ ಬೆಳವಣಿಗೆ. ಸಾಂಸಾರಿಕ ಸಮಾಧಾನ.

ಸಿಂಹ
ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಅದು ನಿಮಗೆ ಪ್ರತಿಕೂಲ ಆದೀತು. ಮನೆಯ ಆವಶ್ಯಕತೆಗೆ  ತುರ್ತು ಗಮನ ಕೊಡಬೇಕು.

ಕನ್ಯಾ
ಕೆಲಸದಲ್ಲಿ ಒತ್ತಡ ಕಡಿಮೆ. ಹೊಣೆಗಾರಿಕೆ ಕಳಚುವುದು. ಇದರಿಂದ ಮನಸ್ಸಿಗೆ ನಿರಾಳತೆ. ಕೌಟುಂಬಿಕ ಕಾರ್ಯದಲ್ಲಿ ಆಸಕ್ತಿ. ಬಂಧು ಭೇಟಿ.

ತುಲಾ
ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ನಿಮಗೆ ಜವಾಬ್ದಾರಿ ಹೆಚ್ಚುವುದು. ಹಣಕ್ಕೆ ಸಂಬಂಧಿಸಿ ತೆಗೆದುಕೊಳ್ಳುವ ನಿರ್ಧಾರ ಉತ್ತಮ ಫಲ ನೀಡಲಿದೆ.

ವೃಶ್ಚಿಕ
ಕಾರ್ಯಗಳೆಲ್ಲ ಸಂಪೂರ್ಣ. ಆದರೂ ನಿಮಗೆ ತೃಪ್ತಿಯಿಲ್ಲ. ಹೇಳಲಾಗದ ಅತೃಪ್ತಿ , ಅಸಹನೆ ಕಾಡುವುದು. ಅದಕ್ಕೆ ನಿಮ್ಮ ಮನಸ್ಥಿತಿಯೂ ಕಾರಣ.

ಧನು
ಏರುಪೇರು ತುಂಬಿದ ದಿನ. ಹೊಣೆಗಾರಿಕೆ ಹೆಚ್ಚಳ. ಅದನ್ನು ಸರಿಯಾಗಿ ನಿಭಾಯಿ ಸಲು ಸೋಲುವಿರಿ. ಆದರೆ ಕೌಟುಂಬಿಕ ಸಮಾಧಾನ.

ಮಕರ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಹೊಸ ಸಮಸ್ಯೆ ಸೃಷ್ಟಿ. ಅವನ್ನು ಏಕಕಾಲದಲ್ಲಿ ಪರಿಹರಿಸಲು ಗಮನ ಕೊಡಿ.ಯಾವುದನ್ನೂ ಕಡೆಗಣಿಸಬೇಡಿ.

ಕುಂಭ
ನೆಗೆಟಿವ್ ಚಿಂತನೆಗಳನ್ನು ಬಿಟ್ಟುಬಿಡಿ. ಅದು ಇಲ್ಲದ ಆತಂಕ ತುಂಬುವುದು. ಕೆಲಸದಲ್ಲಿ ನಿಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿ.

ಮೀನ
ಸಣ್ಣ ವಿಷಯಕ್ಕೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಿರಿ. ಮಾನಸಿಕ ನೋವೂ ಅನುಭವಿಸುವಿರಿ.ಕೆಲ ವಿಷಯಗಳಲ್ಲಿ  ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here