ದರ್ಶನ್‌ ಇನೋಸೆಂಟ್‌, ಬಿಗ್‌ ಅಪ್‌ಡೇಟ್‌ ಕೊಟ್ಟ ಲಾಯರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ 13 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳು ಒಂದು ದಿನ ಜೈಲಿನಲ್ಲೇ ಕಳೆದಿದ್ದಾರೆ. ಆದರೆ ಇದೀಗ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮಾತನಾಡಿ ಬಿಗ್ ಅಪ್​ಡೇಟ್ ಕೊಟ್ಟಿದ್ದಾರೆ.

ನಟ ದರ್ಶನ್ ಅವರಿಗೆ ಒಂಚೂರು ಏನೆಂದು ಗೊತ್ತಿಲ್ಲ, ಈ ಕೇಸ್​ನಲ್ಲಿ ಅವರು ಇನೋಸೆಂಟ್.  ಹತ್ಯೆಯಲ್ಲಿ ನಿನ್ನೆವರೆಗೂ ನನಗೂ ಕೆಲವು ಕನ್ಫ್ಯೂಷನ್‌ ಹಾಗೂ ಅನುಮಾನಗಳು ಇತ್ತು. ಆದರೆ ಈ ಬಗ್ಗೆ ದರ್ಶನ್‌ ಬಳಿ ಮಾತನಾಡಿದ ಮೇಲೆ ಸತ್ಯ ಗೊತ್ತಾಗಿದೆ. ಅವರ ತಪ್ಪಿಲ್ಲ. ಮರ್ಡರ್‌ ಆಗಿದೆ ಅನ್ನೋದು ಕೂಡ ಅವರಿಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!