ಆಂಧ್ರದ ಈ ಊರಿನ ಜನರಿಗೆ ಚಪ್ಪಲಿ ಕಳುಹಿಸಿದ ಡಿಸಿಎಂ ಪವನ್​ ಕಲ್ಯಾಣ್: ಕಾರಣವೇನು?​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್ ಅವರು ​ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ದುಂಬ್ರಿಗುಡ ಮಂಡಲದ ಪೆದಪಾಡು ಗ್ರಾಮದ ಪ್ರತಿ ನಿವಾಸಿಗಳಿಗೆ ಚಪ್ಪಲಿಗಳನ್ನು ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಇತ್ತೀಚೆಗೆ ಪವನ್ ಕಲ್ಯಾಣ್, ಅರಕು ಮತ್ತು ದುಂಬ್ರಿಗುಡ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪೆದಪಡು ಗ್ರಾಮಕ್ಕೆ ಭೇಟಿ ನೀಡಿದ್ದ ಕ್ಷಣ ಹಿರಿಯ ಮಹಿಳೆಯರು ಬರಿಗಾಲಲ್ಲಿ ಇರುವುದನ್ನೂ ಗಮನಿಸಿದ್ದಾರೆ. ಇದರಿಂದ ಬೇಸರಗೊಂಡ ಅವರು, ಗ್ರಾಮದಲ್ಲಿ ಎಷ್ಟು ನಿವಾಸಿಗಳಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಬಳಿಕ, ಗ್ರಾಮದ ಪ್ರತಿ ನಿವಾಸಿಗಳಿಗೂ ಚಪ್ಪಲಿ ಒದಗಿಸುವಂತೆ ಸೂಚಿಸಿದ್ದಾರೆ.

ಪವನ್​ ಕಲ್ಯಾಣ್​ ಅವರ ಈ ಕ್ರಮಕ್ಕೆ ಗ್ರಾಮಸ್ಥರು ಸಂತೋಷ ಮತ್ತು ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಸಂಕಷ್ಟವನ್ನು ಗುರುತಿಸಿ, ಸ್ಪಂದಿಸಿರುವುದು ಸಂತಸ ಮೂಡಿಸಿದೆ ಎಂದು ಕೆಲವು ಗ್ರಾಮಸ್ಥರು ಗದ್ಗದಿತರಾದರು.

ಈ ಪ್ರವಾಸದ ಸಂದರ್ಭದಲ್ಲಿ ಪವನ್​ ಕಲ್ಯಾಣ್​ ಮಗ ಸಿಂಗಾಪುರದಲ್ಲಿ ಓದುತ್ತಿದ್ದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರವಾಸ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರವಾಸ ಕೈಗೊಂಡು, ಅರಕು ಬಳಿಕ ಕುರಿಡಿ ಗ್ರಾಮಕ್ಕೆ ಭೇಟಿ ನೀಡಿ, ಜನರ ಸಮಸ್ಯೆಯನ್ನು ಆಲಿಸುವ ಭರವಸೆ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!