ದಿಗಂತ ವರದಿ ವಿಜಯಪುರ:
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ರಸ್ತೆ ಪಕ್ಕದ ಪದ್ಮಾವತಿ ಗುಡ್ಡದ ಬಳಿ ನಿರ್ಮಾಣ ಹಂತದಲ್ಲಿರುವ ಕೊಳಚೆ ಅಭಿವೃದ್ದಿ ಮಂಡಳಿಯ ಮನೆಯೊಂದರಲ್ಲಿ ಸೆಂಟ್ರಿಂಗ್ ಕಾರ್ಮಿಕನೊಬ್ಬ ಅನುಮಾನಾಸ್ಪ ರೀತಿಯಲ್ಲಿ ಶವವಾಗಿ ಪತ್ತೇ ಆಗಿದ್ದಾನೆ. ಮೃತನನ್ನು ವಿಜಯಪುರದ ಅಮ್ಜದ್ ಹಾಜಿಸಾಬ ವಾಲಿಕಾರ (52) ಎಂದು ಗುರುತಿಸಲಾಗಿದೆ.
ಮೃತನ ಬೆನ್ನು ಸೇರಿ ದೇಹದ ಹಿಂಭಾಗ ರಕ್ತದ ಮಡುಗಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆ ಆತನ ಜೊತೆಗೆ ಅದೇ ಕೋಣೆಯಲ್ಲಿ ಇದ್ದ ಮೂವರು ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿ ಕರುಣಾಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.