ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಇಳಿಕೆ: ಅಯ್ಯಪ್ಪ ದರುಶನಕ್ಕೆ ಅವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಳೆದ ಹತ್ತು ದಿನಗಳಿಂದ ಭಕ್ತರ ಸಂಖ್ಯೆ ಏರಿಕೆಯಾಗಿ ನೂಕು ನುಗ್ಗಲು ಉಂಟಾಗಿದ್ದ ಶಬರಿಮಲೆಯಲ್ಲಿ ಇದೀಗ ಭಕ್ತರ ಸಂಖ್ಯೆ ಇಳಿಕೆಯಾಗಿದೆ.

ಇಂದು ಶಬರಿಮಲೆಯಲ್ಲಿ ಎಂದಿಗಿಂತ ಅಯ್ಯಪ್ಪ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ನೂಕು ನುಗ್ಗಲಿನಿಂದ ಕೂಡಿದ್ದ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಶಬರಿಮಲೆಯಿಂದಲೇ ಕರಾವಳಿ ಭಾಗದ ಅಯ್ಯಪ್ಪ ಮಾಲಾಧಾರಿಯೊಬ್ಬರು ವೀಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.

ಟಿಕೆಟ್ ಮಾಡಿದವರು ಭಕ್ತರ ಸಂಖ್ಯೆ ಹೆಚ್ಚಿದೆಯೆಂದು ಕ್ಯಾನ್ಸಲ್ ಮಾಡಬೇಡಿ, ಆರಾಮವಾಗಿ ಬಂದು ಅಯ್ಯಪ್ಪನ ದರ್ಶನ ಮಾಡಬಹುದು. ಇಲ್ಲಿ ಯಾವುದೇ ನೂಕು ನುಗ್ಗಲು ಇಲ್ಲ. ಎಂದಿನಂತೆ ಶಬರಿಮಲೆಯ ಅಯ್ಯಪ್ಪ ದರ್ಶನ ಮಾಡಲು ಸಾಧ್ಯವಾಗುತ್ತದೆ‌. ಪಂಪಾದಿಂದ ಗಣೇಶ ಬೆಟ್ಟವಾಗಿ ಮಾಲಾಧಾರಿಗಳು ಶಬರಿಮಲೆ ಸನ್ನಿಧಾನಕ್ಕೆ ನಿರಂತರವಾಗಿ ಆರಾಮದಲ್ಲಿ ಹೋಗುತ್ತಿದ್ದಾರೆ ಯಾವುದೇ ನೂಕು ನುಗ್ಗಲು ಇಲ್ಲ ಇಂದು ಅಯ್ಯಪ್ಪ ಮಾಲಾಧಾರಿಯೊಬ್ಬರು ವೀಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಇತ್ತೀಚೆಗೆ ನೂಕುನುಗ್ಗಲು ಸಂಭವಿಸಿ ಅವಘಡಗಳು ಸಂಭವಿಸಿತ್ತು. ಭಕ್ತರು ಶಬರಿಮಲೆಯ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!