ಪಹಲ್ಗಾಮ್‌ ದಾಳಿಯಿಂದ ತೀವ್ರ ದುಃಖವಾಗಿದೆ: ವಿನಾಯಿತಿ ಪ್ರಕಟಿಸಿದ ಎಲ್‌ಐಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಹಲ್ಗಾಮ್‌ ಭೀಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗಾಗಿ ಲೈಫ್‌ ಇನ್ಶೂರೆನ್ಸ್‌ ಪಾಲಿಸಿ ವಿನಾಯಿತಿ ಪ್ರಕಟಿಸಿದೆ.

ಪಹಲ್ಗಾಮ್‌ ಘಟನೆಯಿಂದ ತೀವ್ರ ದುಃಖವಾಗಿದೆ. ಬಾಧಿತರನ್ನು ಬೆಂಬಲಿಸಲು ಹಾಗೂ ಆರ್ಥಿಕ ಸಹಾಯ ಒದಗಿಸಲು ಎಲ್‌ಐಸಿ ಬದ್ಧವಾಗಿದೆ. ಕ್ಲೈಮ್‌ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಕಂಪನಿ ಹೇಳಿದೆ.

ಮರಣ ಪ್ರಮಾಣಪತ್ರದ ಬದಲಾಗಿ, ಸರ್ಕಾರಿ ದಾಖಲೆಗಳಲ್ಲಿ ಇರುವ ಯಾವುದೇ ಸಾಕ್ಷಿ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೀಡಲಾದ ಪರಿಹಾರದ ಡಾಕ್ಯುಮೆಂಟ್ಸ್‌ನ್ನು ಕೂಡ ಪುರಾವೆಯಾಗಿ ಎಲ್‌ಐಸಿ ಪರಿಗಣಿಸಲಿದೆ ಎಂದು ಸಿಇಒ ಸಿದ್ಧಾರ್ಥ್‌ ಮೋಹಂತಿ ಹೇಳಿದ್ದಾರೆ.

ಪರಿಹಾರ ಧನ ಹಕ್ಕುದಾರರಿಗೆ ತಲುಪಿದೆಯೋ ಇಲ್ಲವೋ ಎನ್ನುವ ಬಗ್ಗೆಯೂ ಗಮನ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚಿನ ಸಹಾಯಕ್ಕಾಗಿ ಹಕ್ಕುದಾರರು ಹತ್ತಿರದ ಎಲ್‌ಐಸಿ ಶಾಖೆಗೆ ತೆರಳಬಹುದು. ಕಾಲ್ ಸೆಂಟರ್ -022 68276827 ಗೆ ಕರೆ ಮಾಡಬಹುದು ಹಾಗೇ [email protected] www.licindia.in ಇ-ಮೇಲ್‌ ಕೂಡ ಮಾಡಬಹುದಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!