ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ನೀಡಿರುವ ಪರಿಹಾರವೇ ಸಾಕು ಎಂದು ಹೇಳಿರುವ ಮಾಜಿ ಸಿಎಂ ಹೆಚ್ ಡಿಕೆ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದು, ನೀನೊಬ್ಬ ನಾಡದ್ರೋಹಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಲಾಗಿದೆ ಎಂದು ನನಗೆ ಪತ್ರ ಬಂದಿದೆ. ಆದಾಗ್ಯೂ, ನಿಮ್ಮ ಖಾತೆಗೆ ಹಣ ಯಾವಾಗ ಜಮಾ ಆಗುತ್ತದೆ ಎಂಬುದು ನಿಮಗೆ ತಿಳಿದಿಲ್ಲ. ಅವರು ಮಾಡಲಿ ಮಾಡದೇ ಇರಲಿ, ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಇದು ರಾಜಕೀಯ ವಿಚಾರವಲ್ಲ. ನಾವಿಂದು ರಾಷ್ಟ್ರ ದ್ರೋಹದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರು.
ಇದರ ಮಧ್ಯೆ ಕೆಲವು ರಾಜಕಾರಣಿಗಳು ಹೇಳ್ತಾರೆ. ಸಾಕು ಬಿಡಿ ಈಗ ಕೊಟ್ಟಿರೋದು ಅಂತಾರೆ. ಅದೇನು ಇವರ ಮನೆ ಆಸ್ತಿನಾ? ದೇಶಕ್ಕಲ್ಲ, ರಾಜ್ಯಕ್ಕೆ ಇವರು ದ್ರೋಹಿಗಳು. ಕುಮಾರಸ್ವಾಮಿ ಹೇಳಿದ್ದರಂತೆ, ಸಾಕು ಬಿಡಿ ಕೊಟ್ಟಿರುವುದು ಅಂತಾ. ನೀನೊಬ್ಬ ನಾಡದ್ರೋಹಿ ಎಂದು ವಾಗ್ದಾಳಿ ನಡೆಸಿದರು.