ಹೊಸ ದಿಗಂತ ವರದಿ, ಮುರ್ಡೇಶ್ವರ:
ಕಡಲಿಗೆ ಇಳಿದ ಪ್ರವಾಸಿಗ ವಿದ್ಯಾರ್ಥಿಗಳಿಬ್ಬರು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಮೃತ ಪಟ್ಟ ಘಟನೆ ಖ್ಯಾತ ಪ್ರವಾಸಿ ತಾಣ ಮುರ್ಡೇಶ್ವರದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಿವಾಸಿ ಶೇಖ್ ಅಬ್ರಾರ್ ಫಾಷಾ (21)ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ ನಿವಾಸಿ ಸುಶಾಂತ. ಎಂ (21) ಮೃತ ದುರ್ದೈವಿಗಳಾಗಿದ್ದು ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸಿದ ಇವರು ಗುರುವಾರ ಸಂಜೆ ಸಮುದ್ರಕ್ಕೆ ಇಳಿದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮುರ್ಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.