ಅನ್ನದಾನದ ಪುಣ್ಯಕ್ಕೆ ಮುಂದಾದ ಭಕ್ತರು: ತಿರುಮಲ ಅನ್ನಪ್ರಸಾದಂ ಟ್ರಸ್ಟ್​​ಗೆ 2,200 ಕೋಟಿ ದೇಣಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಿರುಮಲ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್​ ನಿತ್ಯ ಉಚಿತ ಅನ್ನದಾನ ಸೇವೆ ನೀಡುತ್ತಿದೆ. ಆದರೆ ಇದೀಗ ಈ ಟ್ರಸ್ಟ್​​ಗೆ 2,200 ಕೋಟಿ ರೂಗೆ ಮೀರಿ ದೇಣಿಗೆ ಹರಿದು ಬಂದಿದೆ.

1984ರಲ್ಲಿ ಮಾಜಿ ಮುಖ್ಯಮಂತ್ರಿ ಎನ್​ಟಿ ರಾಮ ರಾವ್​​ ವೆಂಕಟೇಶ್ವರ ನಿತ್ಯ ಅನ್ನದಾನಂ ಯೋಜನೆ ಅಡಿ ಭಕ್ತರಿಗೆ ಉಚಿತ ಆಹಾರ ಸೇವೆ ನೀಡುವ ಯೋಜನೆ ಜಾರಿಗೆ ತಂದಿದ್ದರು. ಆ ಬಳಿಕ ಈ ಯೋಜನೆಯನ್ನು ಶ್ರೀವೆಂಕಟೇಶ್ವರ ನಿತ್ಯ ಅನ್ನದಾನಂ ಟ್ರಸ್ಟ್​​ ಆಗಿ ಪರಿವರ್ತಿಸಲಾಯಿತು. 2014ರಲ್ಲಿ ಇದನ್ನು ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್​​ ಆಗಿ ಮರು ನಾಮಕರಣ ಮಾಡಲಾಯಿತು.

ಆರಂಭದಲ್ಲಿ ಕೇವಲ 2 ಸಾವಿರ ಭಕ್ತರಿಗೆ ಉಚಿತ ಅನ್ನದಾನ ಸೇವೆಯನ್ನು ನೀಡಲಾಗುತ್ತಿತ್ತು. ಇದೀಗ ಲಕ್ಷಕ್ಕೂ ಮೀರಿದ ಭಕ್ತರಿಗೆ ಪ್ರತಿನಿತ್ಯ ಸೇವೆ ಒದಗಿಸಲಾಗುತ್ತಿದೆ. ಸದ್ಯ ಟ್ರಸ್ಟ್​​ನಲ್ಲಿ 9.7 ಲಕ್ಷ ದಾನಿಗಳು ಇದ್ದಾರೆ. ಇದರಲ್ಲಿ 139 ದಾನಿಗಳು 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡಿದ್ದಾರೆ. 294 ದಾನಿಗಳಿಗಳು ತಲಾ 44 ಲಕ್ಷ ದೇಣಿಗೆ ಜೊತೆಗೆ ದಿನದ ಸಂಪೂರ್ಣ ಅನ್ನದಾನ ಸೇವೆಗೆ ದಾನ ಮಾಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!