ಅಯ್ಯಪ್ಪಸ್ವಾಮಿ ದೇಗುಲ | ಸ್ಕೈವಾಕ್ ಮಾದರಿಯಲ್ಲಿ ನಿರ್ಮಿಸಿದ್ದ ಹಲಗೆ ಕುಸಿದು ಭಕ್ತರಿಗೆ ಗಾಯ

ಹೊಸದಿಗಂತ ವರದಿ ಚಿತ್ರದುರ್ಗ:

ಸ್ಕೈವಾಕ್ ಮಾದರಿಯಲ್ಲಿ ನಿರ್ಮಿಸಿದ್ದ ಮಾರ್ಗದ ಹಲಗೆಗಳು ಕುಸಿದು ಬಿದ್ದ ಪರಿಣಾಮ ಮೂರ್ನಲ್ಕು ಜನರಿಗ ಚಿಕ್ಕಪುಟ್ಟ ಗಾಯಗಳಾಗಿರುವ ಘಟನೆ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಸಂಕ್ರಾಂತಿ ಹಿನ್ನೆಲೆಯಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೀಪೋತ್ಸವ ಕಣ್ತುಂಬಿಕೊಂಡ ಭಕ್ತರು ದೇವರ ದರ್ಶನಕ್ಕೆಂದು ಹಲಗೆಯಲ್ಲಿ ನಿರ್ಮಿಸಿದ್ದ ಸ್ಕೈವಾಕ್ ಮಾದರಿಯ ಮಾರ್ಗದ ಮೇಲೆ ಸಾಗುತ್ತಿದ್ದರು.

ನಿರೀಕ್ಷೆಗೂ ಮೀರಿ ಭಕ್ತ ಜನರು ಜಮಾಯಿಸಿದ್ದರಿಂದ ಹಲಗೆಯ ಮಾರ್ಗದ ಮೇಲೆ ಸಾಗುವಾಗ ಇದ್ದಕ್ಕಿದ್ದತೆ ಹಲಗೆಗಳು ಕುಸಿದು ಬಿದ್ದಿವೆ. ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!