July 29, 2026
Wednesday, July 29, 2026
spot_img

ಜೇನುಕಲ್ಲು ಗುಡ್ಡದ ಮೇಲಿನಿಂದ ಜಿಗಿದು ಧಾರವಾಡದ ವ್ಯಕ್ತಿ ಆತ್ಮ*ಹತ್ಯೆ

ಹೊಸದಿಗಂತ ವರದಿ ಯಲ್ಲಾಪುರ :

ತಾಲೂಕಿನ ಪ್ರವಾಸಿ ತಾಣ ಜೇನುಕಲ್ಲು ಗುಡ್ಡದ ಮೇಲಿನಿಂದ ಜಿಗಿದು ಧಾರವಾಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಧಾರವಾಡದ ಹೊಸಯಲ್ಲಾಪುರದ ನಿವಾಸಿ ಶ್ರೀನಿಧಿ ಕಡಕೋಳ (23) ಎಂಬ ಯುವಕ ಮನೆಯಲ್ಲಿ ಸ್ಕೂಟಿಯಲ್ಲಿ ಗೋಕರ್ಣ ಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದನು

ನನ್ನ ಮಗ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ, ಇದು ಆತ್ಮಹತ್ಯೆಯೇ, ನಮಗೆ ಯಾವ ಸಂಶಯವೂ ಇಲ್ಲ ಎಂದು
ಮೃತನ ತಂದೆ ಕೃಷ್ಣ ಕಡಕೋಳ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ಪಿ ಎಸ್ ಆಯ್ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿ ಶವವನ್ನು ಮೇಲಕ್ಕೆ ತರುವ ಕಾರ್ಯ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !