ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳಗಾವಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಭಾಷಣ ಮಾಡುತ್ತಿದ್ದಾಗ ಡಯಾಸ್ ಗಾಜು ಒಡೆದ ಘಟನೆ ನಡೆದಿದೆ.
ಇಂದು ಬೆಳಗಾವಿಯ ಗೋಕಾಕ್ ನಗರದ ಕೆಜಿಎನ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಅವರ ಚುನಾವಣಾ ಭಾಷಣದಲ್ಲಿ ಜಮೀರ್ ಭಾಗವಹಿಸಿದ್ದರು. ಈ ವೇಳೆ ರೋಷಾವೇಶ ತೋರಿದ ಜಮೀರ್ ಡಯಾಸ್ ಗ್ಲಾಸ್ ಅನ್ನು ಒಡೆದಿದ್ದಾರೆ.
ಸಾರೇ ಜಹಾಂಸೇ ಅಚ್ಚಾ ಎಂದು ಹೇಳುತ್ತ ನಾವೆಲ್ಲಾ ಒಂದು. ದೇಶ ಹಮಾರಾ ಹೈ ಹಮಾರಾ ಹೈ ಎನ್ನುತ್ತಾ ಜಮೀರ್ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್ ಗೆ ಅಳವಡಿಸಿದ ಗಾಜು ಒಡೆದು ಚೂರಾಗಿದೆ.
ಗಾಜು ಪೀಸ್ ಪೀಸ್ ಆಗುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದ್ದಾರೆ. ಜಮೀರ್ ಬಡಿದ ತಕ್ಷಣ ಡಯಾಜ್ ಗೆ ಅಳವಡಿಸಿದ್ದ ಗಾಜು ಒಡೆದು ಹೋಗಿದೆ. ಗಾಜು ಒಡೆದಾಗ ನೆರೆದಿದ್ದ ಕಾರ್ಯಕರ್ತರು ಕಿರುಚಾಡಿದರು.