ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಾವಿರಾರು ಸಮಸ್ಯೆಗಳಿವೆ, ಯುವ ಪೀಳಿಗೆ ನಿರುದ್ಯೋಗದಿಂದ ಸಮಸ್ಯೆ ಎದುರಿಸುತ್ತಿದೆ. ಹೀಗಿರುವಾಗ ಪ್ರಧಾನಿ ಮೋದಿ ಯುವಜನೋತ್ಸವ ಉದ್ಘಾಟಿಸೋಕೆ ಹೇಗೆ ಬರ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಿರುದ್ಯೋಗ, ಸರ್ಕಾರಿ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಶಿಕ್ಷಣ ಕ್ಷೇತ್ರದಲ್ಲಿ ನಿರ್ಲಕ್ಷ್ಯ ಒಂದಲ್ಲಾ ಎರಡಲ್ಲಾ, ಸಾಲು ಸಾಲು ಸಮಸ್ಯೆಗಳಿಗೆ ರಾಜ್ಯವೇ ಬಲಿಯಾಗ್ತಿದೆ. ಹೀಗಿರುವಾಗ ಯುವಜನತೆಯನ್ನು ಅಣಕಿಸುವಂತೆ ಯುವಜನೋತ್ಸವ ಉದ್ಘಾಟಿಸಲು ಪ್ರಧಾನಿ ಮೋದಿ ಬರ್ತಿದ್ದಾರೆ. ಅವರಿಗೆ ಸ್ವಾಗತ ಎಂದಿದ್ದಾರೆ.
ಒಟ್ಟಾರೆ 25 ಲಕ್ಷ ನಿರುದ್ಯೋಗಿಗಳಿದ್ದಾರೆ, 2.52 ಲಕ್ಷ ಸರ್ಕಾರಿ ಉದ್ಯೋಗಳು ಖಾಲಿ ಇವೆ. ಇಂಥ ಪರಿಸ್ಥಿತಿ ಇರುವಾಗ ಯಾವ ಮುಖ ಹೊತ್ತು ಇಂಥ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಇದು ಯುವಜನೋತ್ಸವ ಅಲ್ಲ, ಯುವ ವಿನಾಶೋತ್ಸವ ಎಂದಿದ್ದಾರೆ.