ರಾಮಸೇತುವಿಗೆ ಪುರಾವೆ ಇಲ್ಲ ಎಂದಿದೆಯಾ ಮೋದಿ ಸರ್ಕಾರ?- ಫ್ಯಾಕ್ಟ್ ಚೆಕ್

ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಮೋದಿ ಸರ್ಕಾರದ ಸಚಿವರೇ ರಾಮಸೇತುವಿಗೆ ವೈಜ್ಞಾನಿಕ ಪುರಾವೆ ಇಲ್ಲವೆಂದು ಹೇಳಿದ್ದಾರೆ” ಎಂಬರ್ಥದ ಸುದ್ದಿಯನ್ನು ಕನ್ನಡದಲ್ಲಿಯೂ ಕೆಲವು ಜಾಲತಾಣಗಳು ಪ್ರಕಟಮಾಡಿವೆ. ಕನ್ನಡದ ಮಟ್ಟಿಗೆ ಮುಖ್ಯವಾಹಿನಿ ಮಾಧ್ಯಮ ಯಾವುದೂ ಈ ಬಗೆಯ ಸುದ್ದಿ ಮಾಡಿಲ್ಲವಾದರೂ, ಆಂಗ್ಲದಲ್ಲಿ ಟೆಲಿಗ್ರಾಫ್ ಮಾಡಿರುವ ವರದಿಯೇ ಈ ಬಗೆಯ ಸುದ್ದಿಗಳು ಹುಟ್ಟುವುದಕ್ಕೆ ಮೂಲ ಎಂಬುದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಎತ್ತಿ ತೋರಿಸಿರುವ ಅಂಶ.
ಸಂಸತ್ತಿನಲ್ಲಿ ಮೋದಿ ಸರ್ಕಾರ ಈ ಬಗೆಯ ಯಾವುದೇ ಹೇಳಿಕೆ ನೀಡಿಲ್ಲ ಎಂದಿರುವ ಸಚಿವ ಜಿತೇಂದ್ರ ಸಿಂಗ್ ಅವರು ಈ ಸಂಬಂಧ ತಾವು ಸಂಸತ್ತಿನಲ್ಲಿ ಮಾತನಾಡಿರುವ ವಿಡಿಯೋ ತುಣುಕನ್ನೇ ಲಗತ್ತಿಸಿದ್ದಾರೆ. ತಪ್ಪಾಗಿ ವರದಿ ಮಾಡಿರುವ ಟೆಲಿಗ್ರಾಫ್ ವರದಿಗಾರ ಸಹ ಕಾಂಗ್ರೆಸ್ಸಿನವರಂತೆ ಕಣ್ಣು-ಕಿವಿ ಮುಚ್ಚಿಕೊಂಡಿದ್ದಂತೆ ತೋರುತ್ತದೆ ಅಂತಲೂ ಅವರು ವ್ಯಂಗ್ಯದ ಬಾಣ ಬಿಟ್ಟಿದ್ದಾರೆ.

ವಿಡಿಯೋ ಗಮನಿಸಿದಾಗ, ಅಲ್ಲಿ ಸಚಿವರು ಹೇಳಿರುವುದರ ಸಾರವಿಷ್ಟು- “ರಾಮಸೇತು ವಿಚಾರದಲ್ಲಿ ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಳನ್ನು ಮಾಡುವುದಕ್ಕೆ ಇತಿಮಿತಿಗಳಿವೆ. ಲಂಕಾ-ಭಾರತ ಮಧ್ಯದಲ್ಲಿ ಭೂಭಾಗದ ನಿರಂತರತೆ ಇರುವುದು ಬಾಹ್ಯಾಕಾಶ ವಿಜ್ಞಾನದಿಂದಲಂತೂ ದೃಢಪಟ್ಟಿದೆ. ಇದು ಸೇತುವೆಯೇ ಆಗಿತ್ತು ಎಂದು ಸಾಬೀತುಪಡಿಸುವಷ್ಟು ಸಂಶೋಧನೆಗಳು ಈ ಹಂತದಲ್ಲಿ ಸಾಧ್ಯವಾಗಿಲ್ಲವಾದರೂ, ಅಲ್ಲಿರುವ ನಿರ್ಮಿತಿಗಳನ್ನೆಲ್ಲ ಒಟ್ಟಿಗಿರಿಸಿಕೊಂಡು ವಿಶ್ಲೇಷಿಸಿದಾಗ, ಸೇತುವೆಯಂಥ ರಚನೆಯೊಂದು ಇದ್ದದ್ದು ಸ್ಪಷ್ಟವಾಗುತ್ತದೆ.”
ಸಚಿವರ ಹೇಳಿಕೆಯಲ್ಲಿ ಎಲ್ಲಿಯೂ ರಾಮಸೇತುವಿನ ನಿರಾಕರಣೆ ಕಂಡುಬಂದಿಲ್ಲ ಎಂಬುದಂತೂ ರಾಜ್ಯಸಭೆ ಕಲಾಪದ ವಿಡಿಯೊದಲ್ಲಿ ಸ್ಪಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!