ಸರ್ಕಾರಿ ಹಣದಲ್ಲಿ ಸಿಎಂ ವಿಧಾನಸಭೆಯ ಭಾಷಣ ಪುಸ್ತಕ ಹಂಚಿಕೆ: ಚುನಾವಣಾ ಆಯೋಗಕ್ಕೆ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರದ ಹಣದಲ್ಲಿ ಕೇರಳ ಮುಖ್ಯಮಂತ್ರಿಗಳ ವಿಧಾನಸಭೆ ಭಾಷಣವನ್ನು ಮನೆಮನೆಗೆ ಹಂಚಲಾಗುತ್ತಿದೆ, ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ಟಿಎನ್ ಪ್ರತಾಪನ್ ಈ ದೂರು ದಾಖಲಿಸಿದ್ದು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರನ್ನು ಆರೋಪಿತರನ್ನಾಗಿಸಲಾಗಿದೆ.

ರಾಜ್ಯ ಸರ್ಕಾರದ ಸಾಮಾನ್ಯ ಖಜಾನೆಯಿಂದ ಹಣ ಖರ್ಚು ಮಾಡಿ 16 ಪುಟಗಳ ಪುಸ್ತಕ ಮುದ್ರಿಸಲಾಗಿದೆ. ಇದನ್ನು ಮನೆಮನೆಗೆ ಹಂಚಲಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!