ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್, ಎಚ್ಡಿ ಕುಮಾರ್ ಸ್ವಾಮಿ ಬಗ್ಗೆ ಮಾತನಾಡಿದ್ದರು. ಈ ಹೋಲ್ ಸಿನಿಮಾಗೆ ಎಚ್.ಡಿ. ಕುಮಾರಸ್ವಾಮಿ ಕಥಾನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ ಎಂದು ಹೇಳಿದ್ದರು.
ಇದಕ್ಕೆ ಎಚ್ಡಿಕೆ ತಿರುಗೇಟು ನೀಡಿದ್ದಾರೆ. ಹೌದು ನಾನೇ ಪ್ರೊಡ್ಯೂಸರ್.. ನಾನೇ ಡೈರೆಕ್ಟರ್.. ನಾನೇ ಕಥಾನಾಯಕ ಎಂದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ದೃಶ್ಯಂ ಸಿನಿಮಾ ಥರದ ಸ್ಟೋರಿಗಳು ಈಗಾಗಲೇ ಬಂದಾಗಿದೆ. ಸ್ಟೋರಿಗಳಿಗೆ ಕಥಾನಾಯಕ ಬೇಕು ಅಲ್ವಾ. ನನ್ನನ್ನೇ ಕಥಾನಾಯಕ ಮಾಡಿಕೊಂಡಿದ್ದಾರೆ ಅಷ್ಟೆ ಎಂದಿದ್ದಾರೆ.