ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ಬುಧವಾರ ಭಾರತ ನಡೆಸಿದ ನಿಖರ ದಾಳಿಯ ನಂತರ, ಮುರಿಡ್ಕೆಯಲ್ಲಿರುವ ಭಯೋತ್ಪಾದಕ ನೆಲೆಯು ಅವಶೇಷಗಳಾಗಿ ಮಾರ್ಪಟ್ಟಿದೆ.
ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾ, ಲಷ್ಕರ್-ಎ-ತೈಬಾದ ಪ್ರಮುಖ ತರಬೇತಿ ಕೇಂದ್ರವಾಗಿದೆ. ಈ ಸಂಕೀರ್ಣವು ಶಸ್ತ್ರಾಸ್ತ್ರ ಮತ್ತು ದೈಹಿಕ ತರಬೇತಿ ಸೌಲಭ್ಯವನ್ನು ಹೊಂದಿದೆ, ಜೊತೆಗೆ ಪಾಕಿಸ್ತಾನದ ಒಳಗೆ ಮತ್ತು ವಿದೇಶಗಳಿಂದ ಭಯೋತ್ಪಾದಕ ಸಂಘಟನೆಗಳಿಗೆ ದವಾ ಮತ್ತು ಮೂಲಭೂತವಾದವನ್ನು ಒದಗಿಸುತ್ತದೆ.
ಭಾರತೀಯ ಪಡೆಗಳು ನಡೆಸಿದ ದಾಳಿಯ ನಂತರ ಭಯೋತ್ಪಾದಕ ಮೂಲಸೌಕರ್ಯ ಸಂಪೂರ್ಣವಾಗಿ ಹಾನಿಗೊಳಗಾಗಿರುವುದನ್ನು ರಾಯಿಟರ್ಸ್ ಪಡೆದ ದೃಶ್ಯಗಳು ತೋರಿಸುತ್ತವೆ. ಭಾರತದ ದಾಳಿಯ ನಂತರ ನಾಲ್ಕು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ಶೇಖುಪುರ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಉಸ್ಮಾನ್ ಜಲೀಸ್ಮ್ ಹೇಳಿದ್ದಾರೆ.
ರಾಯಿಟರ್ಸ್ ಪಡೆದ ಮ್ಯಾಕ್ಸರ್ ಟೆಕ್ನಾಲಜೀಸ್ನಿಂದ ಪಡೆದ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಬಹಾವಲ್ಪುರ್ ಮತ್ತು ಮುರಿಡ್ಕೆ ನಗರಗಳ ಜಾಮಿಯಾ ಮಸೀದಿಯ ಮೇಲೆ ಭಾರತೀಯ ಕ್ಷಿಪಣಿ ದಾಳಿಯಿಂದ ಉಂಟಾದ ಹಾನಿಯನ್ನು ತೋರಿಸುತ್ತವೆ. ದಾಳಿಯ ಮೊದಲು ಮತ್ತು ದಾಳಿಯ ನಂತರ ಆ ಪ್ರದೇಶವು ಹೇಗೆ ಇತ್ತು ಎಂಬುದನ್ನು ಉಪಗ್ರಹ ಚಿತ್ರಗಳು ತೋರಿಸುತ್ತವೆ.