’ಆನ್‌ಲೈನ್ ಶಾಲೆ ಮೂಲಕ ಮಕ್ಕಳಿಗೆ ಮೊಬೈಲ್ ಹುಚ್ಚು ಹಿಡಿಸಿ, ಹುಚ್ಚು ಬಿಡಿಸಲು ಧ್ಯಾನ ಮಾಡಿಸ್ತೀರಾ?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಹತ್ತು ನಿಮಿಷದ ಧ್ಯಾನ ಕಡ್ಡಾಯ ಮಾಡಿರುವುದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ ಹಾಗೂ ಆರೋಗ್ಯ ವೃದ್ಧಿಗೆ ಧ್ಯಾನ ಬೇಕು ಎಂದು ಶಿಕ್ಷಣ ಸಚಿವರು ತಿಳಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಟೀಕಿಸಿದ್ದು, ಕೊರೋನಾ ನಿಯಂತ್ರಿಸಲಾಗದೆ ಶಾಲೆ ಮುಚ್ಚಿ, ಆನ್‌ಲೈನ್ ತರಗತಿ ಹೆಸರಿನಲ್ಲಿ ಮಕ್ಕಳಿಗೆ ಮೊಬೈಲ್ ಹುಚ್ಚು ಹಿಡಿಸಿದ್ದೀರಿ. ಇದೀಗ ಆ ಹುಚ್ಚು ಬಿಡಿಸೋದಕ್ಕೆ ಧ್ಯಾನ ಮಾಡಿಸಿ ಅಂತೀರಿ, ಹುಚ್ಚು ಬಿಡಿಸಲು ಧ್ಯಾನ ಆರಂಭಿಸೋದು ಹುಚ್ಚುತನ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.

ಯೋಗ ಧ್ಯಾನಕ್ಕೆ ನಾನು ವಿರೋಧಿ ಅಲ್ಲ, ಆದರೆ ಶಾಲೆಗಳಲ್ಲಿ ಏನು ಮುಖ್ಯ? ಶಿಕ್ಷಣ ಸಚಿವರ ಆದ್ಯತೆ ಯಾವುದಾಗಬೇಕಿತ್ತು? ಎಳೆ ಮಕ್ಕಳಲ್ಲಿ ಕ್ಲಾಸ್‌ರೂಂನಲ್ಲಿ ಕೂಡಿ ಹಾಕಿ ಬಲವಂತವಾಗಿ ಧ್ಯಾನ ಮಾಡಿಸಿದರೆ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ಅಗತ್ಯ ಶಿಕ್ಷಕರನ್ನು ನೇಮಿಸಿ, ಬೋಧನಾ ಸಲಕರಣೆಗಳನ್ನು ನೀಡಿ. ಶಾಲೆಗಳಲ್ಲಿ ಕಲೆ, ಸಂಗೀತ, ಕ್ರೀಡಾ ಶಿಕ್ಷಕರು ಇರಲಿ ಅದನ್ನು ಬಿಟ್ಟು ಹೀಗೇಕೆ ಮಾಡುತ್ತೀರಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!