ದೊಡ್ಡಣಗುಡ್ಡೆ, ಕಲ್ಸಂಕ, ಗುಂಡಿಬೈಲು, ಬೈಲಕೆರೆ… ಜಡಿಮಳೆಗೆ ಉಡುಪಿ ನಗರದ ಜನತೆ ಹೈರಾಣ!

ಹೊಸ ದಿಗಂತ, ಮಂಗಳೂರು:

ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸೋಮವಾರ ಉಡುಪಿ ನಗರದಲ್ಲಿ ಸಂಕಷ್ಟದ ಸರಮಾಲೆಯೇ ಸೃಷ್ಟಿಯಾಗಿದೆ.

ಮಳೆ ನೀರು ಎಲ್ಲೆಂದರಲ್ಲಿ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ನಗರದ ಗುಂಡಿಬೈಲು ಪರಿಸರದ ರಸ್ತೆಗಳಲ್ಲಿ ವಾಹನ ಸಂಚಾರ, ಜನಸಂಚಾರವನ್ನು ನಿರ್ಬಂಧಿಸಲಾಗಿದೆ.

ಇನ್ನು ನಗರ ವ್ಯಾಪ್ತಿಯ ದೊಡ್ಡಣಗುಡ್ಡೆ, ಕಲ್ಸಂಕ, ಗುಂಡಿಬೈಲು, ಬೈಲಕೆರೆ ಮುಂತಾದ ಪ್ರದೇಶಗಳು ಕೂಡಾ ಜಲಾವೃತಗೊಂಡಿದ್ದು, ಸಹಜ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಅತಂತ್ರಗೊಂಡಿರುವ ಸ್ಥಳಗಳಿಗೆ ನಗರ ಪಾಲಿಕೆ ಆಯುಕ್ತರು ಖುದ್ದು ಭೇಟಿ ನೀಡುತ್ತಿದ್ದು, ಸೂಕ್ತ ಕ್ರಮಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!