ಹೊಸದಿಗಂತ ಡಿಜಿಟಲ್ ಡೆಸ್ಕ್
ಏಷ್ಯಾಕಪ್ ಟಿ20 ಟೂರ್ನಿಯ ಸೂಪರ್-4 ಹಂತದಲ್ಲಿ ಭಾರತ ಸತತ ಎರಡು ಸೋಲು ಕಂಡಿದೆ.ಇದರಿಂದ ಫೈನಲ್ ಹೋಗುವ ಆಸೆ ಬಹುತೇಕವಾಗಿ ಡೌಟ್ ಎನ್ನಲಾಗುತ್ತಿದೆ, ಆದರೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಮಾತ್ರ ತಂಡ ಫೈನಲ್ಗೇರುವ ವಿಶ್ವಾಸದಲ್ಲಿದ್ದಾರೆ.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮ, ಸುಮ್ನೆ ಟೆನ್ಶನ್ ತಗೋಬೇಡಿ. ಎಲ್ಲಾ ಆಗುತ್ತೆ. ಫೈನಲ್ಗೆ ಹೋಗ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಸೋಲಿನ ಬಳಿಕ ತಂಡದ ಡ್ರೆಸಿಂಗ್ ರೂಮ್ ವಾತಾವರಣ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪ್ರಕಾರ ಏನೋ ತಪ್ಪಾಗಿದೆ ಎಂದು ನನಗೆ ಅನಿಸೋದಿಲ್ಲ. ಹೊರಗಡೆಯಿಂದ ನಿಂತು ನೋಡಿದಾಗ ನಿಮಗೆ ಹಾಗೆ ಅನಿಸಬಹುದು. ಆದರೆ, ತಂಡದ ಡ್ರೆಸಿಂಗ್ ರೂಮ್ ಹಾಗಿಲ್ಲ. ನಾನು ಸಾಕಷ್ಟು ಸುದ್ದಿಗೋಷ್ಠಿಯನ್ನು ಎದುರಿಸಿದ್ದೇನೆ. ಸೋಲು ಕಂಡಾಗ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದೆಲ್ಲಾ ಸಹಜವಾದ ವಿಚಾರ ಎಂದರು.
ಈಗಲೇ ನೀವು ಡ್ರೆಸಿಂಗ್ ರೂಮ್ಗೆ ಹೋಗಿ, ನಮ್ಮ ಆಟಗಾರರು ನಿರಾಳವಾಗಿದ್ದಾರೆ. ತಂಡ ಸೋಲಲಿ ಅಥವಾ ಗೆಲ್ಲಲಿ ಒಂದೇ ರೀತಿ ಇರಬೇಕು. ಅಂಥದ್ದೊಂದು ವಾತಾವರಣ ಟೀಮ್ ಇಂಡಿಯಾದಲ್ಲಿದೆ ಎಂದು ರೋಹಿತ್ ಶರ್ಮ ಹೇಳಿದ್ದಾರೆ.