September 14, 2026
Monday, September 14, 2026
spot_img

ಸೂರ್ಯನ ಕೆಂಗಣ್ಣಿನಿಂದ ಬಾಡದಿರಲಿ ನಿಮ್ಮ ಆರೋಗ್ಯ: ಹೈಡ್ರೇಟ್ ಆಗಿರಲು ಇಲ್ಲಿದೆ ‘ಕೂಲ್’ ಪ್ಲಾನ್

ರಾಜ್ಯದಲ್ಲಿ ಸೂರ್ಯನ ಅಬ್ಬರ ಜೋರಾಗಿದೆ. ತಾಪಮಾನ ಏರುತ್ತಿದ್ದಂತೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಸುಸ್ತು, ತಲೆನೋವು ಕಾಣಿಸಿಕೊಳ್ಳುವುದು ಸಹಜ. ಈ “ಹೀಟ್” ನಿಂದ ಪಾರಾಗಲು ನೀವು ಮಾಡಬೇಕಾದ್ದು ಇಷ್ಟೇ:

ಬಾಯಾರಿಕೆಯಾಗಲಿ ಅಥವಾ ಬಿಡಲಿ, ಗಂಟೆಗೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಅಗತ್ಯ.

ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ರಸ ಮತ್ತು ಕಬ್ಬಿನ ಹಾಲು ದೇಹವನ್ನು ತಂಪಾಗಿಸುವುದಲ್ಲದೆ ಎಲೆಕ್ಟ್ರೋಲೈಟ್ಸ್ ಸಮತೋಲನ ಕಾಯ್ದುಕೊಳ್ಳುತ್ತವೆ.

ಕಲ್ಲಂಗಡಿ, ಕರ್ಬೂಜ, ಸೌತೆಕಾಯಿ ಹಾಗೂ ಕಿತ್ತಳೆ ಹಣ್ಣುಗಳಲ್ಲಿ ನೀರಿನಂಶ ಹೆಚ್ಚಿರುತ್ತದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಅತಿಯಾದ ಕಾಫಿ, ಟೀ ಅಥವಾ ಸೋಡಾ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗಬಹುದು. ಇವುಗಳ ಬದಲು ಹಣ್ಣಿನ ಜ್ಯೂಸ್ ಉತ್ತಮ.

ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬಿಸಿಲು ಹೆಚ್ಚಿರುವುದರಿಂದ, ಹೊರಾಂಗಣ ಚಟುವಟಿಕೆಗಳನ್ನು ಈ ಸಮಯದಲ್ಲಿ ಮಾಡದಿರುವುದು ಕ್ಷೇಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !