ಹೊಸದಿಗಂತ ಡಿಜಿಟಲ್ ಡೆಸ್ಕ್ :
ನಟಸಾರ್ವಭೌಮ, ವರನಟ ಡಾ. ರಾಜ್ಕುಮಾರ್ ಅಗಲಿ ಇಂದಿಗೆ 17 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿಗೆ ವಿಶೇಷ ಪೂಜೆ ನೆರವೇರಲಿದೆ. ಈಗಾಗಲೇ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿದ್ದು, ಮೊದಲಿಗೆ ಡಾ. ರಾಜ್ ಕುಟುಂಬದಿಂದ ಪೂಜೆ ನೆರವೇರಲಿದೆ. ಅದಾದ ಬಳಿಕ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಡಾ. ರಾಜ್ ನಟಿಸಿದ ಚಿತ್ರಗಳು, ಸಿನಿಮಾಗಳ ಮೂಲಕ ಹೇಳಿದ ಮಾನವೀಯ ಮೌಲ್ಯಗಳು, ಅವರು ಬದುಕಿದ ರೀತಿಯಿಂದಲೇ ಮನೆ ಮಾತಾಗಿದ್ದರು. ಅವರ ಪುಣ್ಯ ತಿಥಿಯಂದು ಅವರ ಅಭಿಮಾನಿಗಳಿಂದಲೂ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆಯಲಿವೆ.
ಡಾ. ರಾಜ್ ತಮ್ಮ ಮರಣಾನಂತರ ಕಣ್ಣುಗಳನ್ನು ದಾನ ಮಾಡಿದ್ದರು. ಅದರಂತೆ ಸಮಾಧಿ ಸ್ಥಳದಲ್ಲಿ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಸೇರಿ ಹಲವು ಕಾರ್ಯಗಳಿಗೆ ಅಭಿಮಾನಿಗಳು ಚಾಲನೆ ನೀಡಿದ್ದಾರೆ.
ಶುಭೋದಯ | Good morning.
ಅಪ್ಪಾಜಿಯ ಪುಣ್ಯಸ್ಮರಣೆಯಂದು ಅವರ ಸವಿನೆನಪಿನಲ್ಲಿ.Have a blessed day. Take care.
Jai Anjeneya. Jai Gurudev 🙏🙏🙏 pic.twitter.com/cV8q2qVz51— Raghavendra Rajkumar (@RRK_Official_) April 12, 2023
ಈಗಾಗಲೇ ಡಾ. ರಾಜ್ ಸಮಾಧಿ ಬಳಿ ಅಭಿಮಾನಿಗಳ ದಂಡೇ ನೆರೆದಿದ್ದು, ನೆಚ್ಚಿನ ನಟನ ಸಮಾಧಿಗೆ ನಮಸ್ಕರಿಸುತ್ತಿದ್ದಾರೆ.