ಕಾಸರಗೋಡು ಸಮಸ್ಯೆ ಬಗ್ಗೆ ಸಚಿವರ ಗಮನ ಸೆಳೆದ ಹಿರಿಯ ಸಾಹಿತಿ ಡಾ. ಬನಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿರಿಯ ಸಾಹಿತಿ, ಯಕ್ಷಗಾನ ಅರ್ಥದಾರಿ, ಕನ್ನಡಪರ ಹೋರಾಟಗಾರ ಡಾ. ರಮಾನಂದ ಬನಾರಿ ಅವರು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಕಾರ್ಕಳದ ಕಾರ್ಯಾಲಯದಲ್ಲಿ ಭೇಟಿಯಾಗಿ “ಕಾಸರಗೋಡು ಸಮಸ್ಯೆ ಒಂದು ವಿಶ್ಲೇಷಣೆ” ಎನ್ನುವ ಇತ್ತೀಚೆಗಿನ ತನ್ನ ಕೃತಿಯನ್ನು ಗೌರವಪೂರ್ವಕ ನೀಡಿ ಅಭಿನಂದಿಸಿದರು.
ಈ ಕೃತಿಯಲ್ಲಿ ಸಮಸ್ಯೆಯ ಸಮಗ್ರ ಚಿತ್ರಣದೊಂದಿಗೆ ಸಕಾಲಿಕವಾಗಿ ಕೈಗೊಳ್ಳಬಹುದಾದ ಪರಿಹಾರ ಸೂತ್ರಗಳನ್ನು ತಾನು ವಿಶದವಾಗಿ ನಿರೂಪಿಸಿದ್ದೇನೆ ಎಂದು ಸಚಿವರ ಗಮನಕ್ಕೆ ತಂದ ಡಾ. ಬನಾರಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸೂತ್ರಗಳನ್ನು ವಿಮರ್ಶಿಸಿ ಅನುಷ್ಠಾನಕ್ಕೆ ತರಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಹರಿಶ್ಚಂದ್ರ ಮಂಜೇಶ್ವರ ಮತ್ತು ವಿಷ್ಣುಶಶಾಂಕ ಮಂಜೇಶ್ವರ ಜೊತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!