ACCIDENT | ರಭಸದಿಂದ ಬ್ರೇಕ್ ಹಾಕಿದ ಚಾಲಕ: ಬಸ್‌ನಿಂದ ಹೊರಗೆ ಬಿದ್ದು ಮಹಿಳೆ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಹೊರವಲಯದ ಜೋಕಟ್ಟೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಚಾಲಕನ ಅತಿವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

65 ವರ್ಷದ ಈರಮ್ಮ ಬಸ್‌ನಲ್ಲಿ ಮಗಳೊಂದಿಗೆ ಸುರತ್ಕಲ್‌ಗೆ ತೆರಳುತ್ತಿದ್ದರು. ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ಬಳಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ.

ಚಾಲಕನ ಪಕ್ಕದ ಅಡ್ಡ ಸೀಟ್‌ನಲ್ಲಿ ಕುಳಿತಿದ್ದ ಈರಮ್ಮ ಬ್ರೇಕ್ ಹಾಕಿದ ರಭಸಕ್ಕೆ ಕೆಳಗೆ ಬಿದ್ದಿದ್ದಾರೆ. ನಂತರ ಬಸ್‌ನ ಹಿಂಬದಿ ಚಕ್ರ ಈರಮ್ಮ ಮೇಲೆ ಹರಿದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕನ ವಿರುದ್ಧ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!