ಚಾಲನೆಯ ವೇಳೆಯೇ ಚಾಲಕಗೆ ಅನಾರೋಗ್ಯ: ಹಿಮ್ಮುಖ ಚಲಿಸಿ ಉಡುಪಿಯಲ್ಲಿ ಚರಂಡಿಗಿಳಿದ ಬಸ್

ಹೊಸದಿಗಂತ ಮಂಗಳೂರು:

ಚಾಲನೆಯ ವೇಳೆ ಚಾಲಕ ಅನಾರೋಗ್ಯಕ್ಕೆ ತುತ್ತಾಗಿ ಬಸ್ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ಚರಂಡಿಗಿಳಿದ ಘಟನೆ ಉಡುಪಿ ಜಿಲ್ಲೆಯ ಕೆಳಪರ್ಕಳದಲ್ಲಿ ನಡೆದಿದೆ.

ಮಣಿಪಾಲದಿಂದ ಹೆರ್ಗದ ಕಡೆಗೆ ತೆರಳುತ್ತಿದ್ದ ಬಸ್ ಕೆಳಪರ್ಕಳ ಬಳಿ ಬರುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡಿದ್ದು ಪ್ರಯಾಣಿಕರ ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಚಾಲಕ ಅನಾರೋಗ್ಯಕ್ಕೀಡಾದ್ದು ಗೊತ್ತಾಗಿದೆ.

ಬಸ್ ನಿಲ್ಲಿಸಲು ಪ್ರಯತ್ನಿಸಿದರೂ ಕೆಲವೇ ಕ್ಷಣಗಳಲ್ಲಿ ಬಸ್ ಹಿಮ್ಮುಖವಾಗಿ ಚಲಿಸಲು ಆರಂಭವಾಗಿದ್ದು, ಪ್ರಯಾಣಿಕರು ಹೊರಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!