ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯ ತಿಕೋಟಾ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಶುಕ್ರವಾರ ಬೆಳಗಿನ ಜಾವ ಲಘು ಭೂಕಂಪನದ ಅನುಭವಕ್ಕೆ ಭೀತಿಗೊಳ್ಳುವಂತಾಗಿದೆ.
ನಸುಕಿನ ಜಾವ 3 ರಿಂದ 5 ಗಂಟೆ ಒಳಗೆ ಭೂಮಿ ಕಂಪನ ಉಂಟಾಗಿದ್ದು, ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ವಿವಿಧೆಡೆ ಲಘು ಭೂಕಂಪನದ ಪ್ರಕರಣ ಮರುಕಳಿಸುತ್ತಿದ್ದು, ಜನರಲ್ಲಿ ಆತಂಕ ಮೂಡುವಂತಾಗಿದೆ.