ದಿಗಂತ ವರದಿ ಅಂಕೋಲಾ :
ಕೇರಳದ ಚಾಲಕ ಅರ್ಜುನ್ ಪತ್ತೆಗೆ ರಕ್ಷಣಾ ತಂಡಗಳು ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಅವರು ಭಾನುವಾರ ಬೆಳಗ್ಗೆ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೇರಳ ಚಾಲಕನ ಸಂಬಂಧಿಗಳು ನೀಡಿದ ಜಿ.ಪಿ.ಎಸ್. ವಿವರದ ಆಧಾರದಲ್ಲೇ ಅಲ್ಲೇ ಪತ್ತೆ ಕಾರ್ಯ ನಡೆದಿದೆ.
ಇದು ಯಾರೂ ಊಹಿಸಲಾಗದ ಅತಿ ದೊಡ್ಡ ದುರಂತ. ಮಳೆಯ ಮಧ್ಯೆ ಕಾರ್ಯಾಚರಣೆ ದುಸ್ಸಾಧ್ಯವಾದರೂ ಶಕ್ತಿ ಮೀರಿ ನಡೆದಿದೆ. ಇದರಲ್ಲಿ ರಾಜಕಾರಣ ಬರಲೇಬಾರದು. ಪಕ್ಷಾತೀತವಾಗಿ ಬೆಂಬಲ ಸಿಗಬೇಕು ಎಂದರು.