ಕಾಂಗ್ರೆಸ್‌ನ ಎಂಟು ಶಾಸಕರು, ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ್ದು, ಇವರ ಜೊತೆಗೆ ಎಂಟು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಎಂಟು ಸಚಿವರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.

  1. ಜಿ.ಪರಮೇಶ್ವರ್-ಸಂವಿಧಾನದ ಹೆಸರಿನಲ್ಲಿ
  2. ಕೆ.ಎಚ್.ಮುನಿಯಪ್ಪ -ದೇವರ ಹೆಸರಿನಲ್ಲಿ
  3. ಕೆ.ಜೆ.ಜಾರ್ಜ್-ದೇವರ ಹೆಸರಿನಲ್ಲಿ
  4. ಎಂ.ಬಿ.ಪಾಟೀಲ್-ದೇವರ ಹೆಸರಿನಲ್ಲಿ
  5. ಸತೀಶ್ ಜಾರಕಿಹೊಳಿ -ಬುದ್ದ, ಬಸವ ಅಂಬೇಡ್ಕರ್ ಹೆಸರಿನಲ್ಲಿ
  6. ಪ್ರಿಯಾಂಕ್ ಖರ್ಗೆ-ದೇವರ ಹೆಸರಿನಲ್ಲಿ
  7. ರಾಮಲಿಂಗಾ ರೆಡ್ಡಿ-  ದೇವರ ಹೆಸರಿನಲ್ಲಿ
  8. ಜಮೀರ್ ಅಹಮದ್‌- ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!