ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ್ದು, ಇವರ ಜೊತೆಗೆ ಎಂಟು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಎಂಟು ಸಚಿವರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.
- ಜಿ.ಪರಮೇಶ್ವರ್-ಸಂವಿಧಾನದ ಹೆಸರಿನಲ್ಲಿ
- ಕೆ.ಎಚ್.ಮುನಿಯಪ್ಪ -ದೇವರ ಹೆಸರಿನಲ್ಲಿ
- ಕೆ.ಜೆ.ಜಾರ್ಜ್-ದೇವರ ಹೆಸರಿನಲ್ಲಿ
- ಎಂ.ಬಿ.ಪಾಟೀಲ್-ದೇವರ ಹೆಸರಿನಲ್ಲಿ
- ಸತೀಶ್ ಜಾರಕಿಹೊಳಿ -ಬುದ್ದ, ಬಸವ ಅಂಬೇಡ್ಕರ್ ಹೆಸರಿನಲ್ಲಿ
- ಪ್ರಿಯಾಂಕ್ ಖರ್ಗೆ-ದೇವರ ಹೆಸರಿನಲ್ಲಿ
- ರಾಮಲಿಂಗಾ ರೆಡ್ಡಿ- ದೇವರ ಹೆಸರಿನಲ್ಲಿ
- ಜಮೀರ್ ಅಹಮದ್- ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.