ಚುನಾವಣಾ ನೀತಿ ಸಂಹಿತೆ: ಯಡ್ರಾಮಿ, ಆಳಂದ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 14.60 ಲಕ್ಷ ಹಣ ಜಪ್ತಿ

ಹೊಸದಿಗಂತ ವರದಿ,ಕಲಬುರಗಿ:

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಆಳಂದ ಹಾಗೂ ಯಡ್ರಾಮಿ ತಾಲೂಕಿನ ಚೆಕ್ ಪೋಸ್ಟ್ ಬಳಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದ 14.60 ಲಕ್ಷ ರು.ಗಳ ಸೀಜ್ ಮಾಡಲಾಗಿದೆ.

ಗುರುವಾರ ಆಳಂದ ತಾಲೂಕಿನ ಹಿರೋಹಳ್ಳಿ ಚೆಕ್‌ಪೊಸ್ಟ್ ನಲ್ಲಿ 12.60 ಲಕ್ಷ ರು. ಹಣ ಹಾಗೂ ಯಡ್ರಾಮಿ ತಾಲೂಕಿನ ನಾಗ ಅಲ್ಲಾಪುರ ಚೆಕ್‌ ಪೊಸ್ಟ್ ನಲ್ಲಿ ಎರಡು ಲಕ್ಷ ಹಣ ಸೇರಿ ಒಟ್ಟು 14.60 ಲಕ್ಷ ರು. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಿಜಾಪುರ ಕಡೆಯಿಂದ ಯಾದಗಿರಿ ಹೋಗುತಿರುವ ಬುಲೆರೋ ಪಿಕಪ್ ವಾಹದಲ್ಲಿ ದಾಖಲೆ‌ ಇಲ್ಲದೆ ಸಾಗಿಸುತ್ತಿದ್ದಾಗ ಯಡ್ರಾಮಿಯ ನಾಗ ಅಲ್ಲಾಪುರ ಚೆಕ್ ಪೋಸ್ಟ್ ಹತ್ತಿರ ವಾಹನ ತಪಾಸಣೆ ಮಾಡುವ ವೇಳೆಯಲ್ಲಿ ಎರಡು ಲಕ್ಷ ಹಣ ಪತ್ತೆಯಾಗಿದೆ. ಇನ್ನೂ, ಮಹಾರಾಷ್ಟ್ರದ ಸೊಲ್ಲಾಪುರದಿಂದ ಆಳಂದ ಕಡೆಗೆ ಬರುವಾಗ ಹೀರೊಳ್ಳಿ ಚೆಕ್ ಪೊಸ್ಟ್ ನಲ್ಲಿ ಸಂತೋಷ್ ಸಾಳುಂಕೆ ಎಂಬುವರ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುವಾಗ ಹಣ ಜಪ್ತಿ ಮಾಡಲಾಗಿದೆ ಎಂದು ಚೆಕ್ ಪೋಸ್ಟ್ ಪೊಲೀಸ್ ತಂಡವು ತಿಳಿಸಿದೆ.

ಈ ಕುರಿತು ಮದಾನಹಿಪ್ಪರಾಗ ,ಮತ್ತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!