Ayodhya | ಸಂಭ್ರಮದ ಜೊತೆಗೆ ಸ್ವಚ್ಛತೆಗೂ ಒತ್ತು: ಫೀಲ್ಡ್‌ಗೆ ಇಳಿಯಲಿದ್ದಾರೆ 800 ಸಿಬ್ಬಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಲಲಾ ಪ್ರಾಣಪ್ರತಿಷ್ಠೆ ಸಂಭ್ರಮದಲ್ಲಿರುವ ಅಯೋಧ್ಯೆ ನಗರದಲ್ಲಿ ಸಂಭ್ರಮದ ಜೊತೆಗೆ ಸ್ವಚ್ಛತೆಗೂ ಒತ್ತು ನೀಡಲಾಗಿದ್ದು, ಬರೋಬ್ಬರಿ 800 ಮಂದಿ ಸಿಬ್ಬಂದಿಗಳನ್ನು ಇಲ್ಲಿ ಸ್ವಚ್ಛತೆಗಾಗಿಯೇ ನಿಯೋಜಿಸಲಾಗುತ್ತಿದೆ.

ಈ ಸಿಬ್ಬಂದಿಗಳನ್ನು ಏಜೆನ್ಸಿ ನೇಮಿಸಿಕೊಳ್ಳಲಿದೆ. ಇವರು ಇಲ್ಲಿನ ರಸ್ತೆ, ಘಾಟ್, ಶೌಚಾಲಯ, ಕಚೇರಿ ಮತ್ತಿತರ ಸ್ಥಳಗಳ ಸ್ವಚ್ಛತೆಯ ಹೊಣೆ ಹೊತ್ತುಕೊಳ್ಳಲಿದ್ದಾರೆ ಎಂದು ಅಲ್ಲಿನ ನಗರಾಡಳಿತದ ಮೂಲಗಳು ತಿಳಿಸಿವೆ.

ಮಕರ ಸಂಕ್ರಾಂತಿಯಂದು ಇಲ್ಲಿನ ಪವಿತ್ರ ಸರಯೂ ನದಿಯಲ್ಲಿ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಈ ಬಾರಿ ಜ.22 ರಂದು ನಡೆಯುವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಈ ನದಿಯಲ್ಲಿ ಪುಣ್ಯಸ್ನಾನ ಮಾಡುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಜಲಮೂಲದ ಸ್ವಚ್ಛತೆ ಕಾಪಾಡಿಕೊಳ್ಳಲೂ ಆಡಳಿತ ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!