ನಿರಪರಾಧಿ ಎಂದು ಸಾಬೀತಾದಮೇಲೂ ಸಚಿವ ಸ್ಥಾನ ಯಾಕೆ ಸಿಕ್ಕಿಲ್ಲ? : ಸಿಎಂಗೆ ಈಶ್ವರಪ್ಪ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಮಿಷನ್ ಪಡೆದ ಆರೋಪ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರೂ ಅವರಿಗೆ ಸಚಿವ ಸ್ಥಾನ ಒಲಿದುಬಂದಿಲ್ಲ. ಈ ಬಗ್ಗೆ ಈಶ್ವರಪ್ಪ ಮೌನ ಮುರಿದಿದ್ದು, ಈ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಅವರೇ ಉತ್ತರಿಸಲಿ ಎಂದಿದ್ದಾರೆ.
ನಿರಪರಾಧಿ ಎಂದು ತೀರ್ಮಾನ ಆದಮೇಲೂ ನನ್ಯಾಕೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಈ ಪ್ರಶ್ನೆಗೆ ಉತ್ತರಿಸೋಕೆ ನನಗೆ ಆಗೋದಿಲ್ಲ, ಇದಕ್ಕೆ ಸಿಎಂ ಬೊಮ್ಮಾಯಿ ಅವರೇ ಉತ್ತರ ನೀಡಲಿ ಎಂದಿದ್ದಾರೆ.

ನಾನು ವಿಧಾನಸಭೆಗೆ ಕಾಲಿಟ್ಟ ದಿನದಿಂದ ಒಂದು ಬಾರಿಯೂ ಅಧಿವೇಶನಕ್ಕೆ ರಜೆ ಹಾಕಿಲ್ಲ, ನಿದ್ದೆ ಮಾಡಿಲ್ಲ. ವಿಧಾನಸಭೆಯ ಪಾವಿತ್ರ್ಯತೆ ಬಗ್ಗೆ ನನಗೆ ಗೊತ್ತಿದೆ. ಕ್ಲೀನ್ ಚಿಟ್ ಸಿಕ್ಕರೂ ಯಾಕೆ ಸ್ಥಾನ ನೀಡಿಲ್ಲ ನನಗೂ ಗೊತ್ತಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!